ಧ್ವಜಾರೋಹಣಕ್ಕಾಗಿ ಈದ್ಗಾ ಮೈದಾನ, ಮಹಾನಗರ ಪಾಲಿಕೆ ಕಚೇರಿ, ಮಿನಿವಿಧಾನ ಸೌಧ, ನೆಹರೂ ಕ್ರೀಡಾಂಗಣ ಮತ್ತು ವಿವಿಧ ಸರ್ಕಾರಿ ಕಚೇರಿಗಳ ಮುಂದೆ ತಯಾರಿ ನಡೆದಿತ್ತು. ನಿರಂತರ ಮಳೆಯಿಂದ ನೆಹರೂ ಮೈದಾನದಲ್ಲಿ ಬೆಳೆದಿರುವ ಕಸವನ್ನು ಎರಡು ದಿನಗಳಿಂದ ತೆಗೆಯಲಾಗಿದೆ. ಪ್ರತಿ ವರ್ಷ ವಿವಿಧ ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿದ ಬಳಿಕ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಈ ಬಾರಿ ಸರ್ಕಾರಿ ನೌಕರರಿಗಷ್ಟೇ ಆಹ್ವಾನ ನೀಡಲಾಗಿದೆ.