ಶಿವಾನಂದ ಮುತ್ತಣ್ಣವರ ಮಾತನಾಡಿ, ರಾಯಣ್ಣರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧನ ಮಾಡಿದರೆ ಸಾಲದು. ಅವರ ಹಿಂದೆ ಯಾವ್ಯಾವ ಪಕ್ಷದ ಮುಖಂಡರು ಇದ್ದಾರೆ ಎಂದು ಪತ್ತೆ ಹಚ್ಚಬೇಕು. ಬೆಳಗಾವಿಯಲ್ಲಿ ಕೆಲವು ಎಂಇಎಸ್ ಮುಖಂಡರು ಅವರಿಗೆ ಬೆಂಬಲ ನೀಡುತ್ತಿದ್ದು, ಅವರು ಯಾರು ಎಂದು ತನಿಖೆ ನಡೆಸಬೇಕು. ಕನ್ನಡ ನೆಲೆದಲ್ಲಿಯೇ ಇದ್ದು ಎಲ್ಲ ಸೌಲಭ್ಯ ಪಡೆದು ನಾಡ ದ್ರೋಹಿ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.