ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈಲ್ವೆ ಇಲಾಖೆ ಸದಾ ಹೊಸತನಕ್ಕೆ ತುಡಿಯುತ್ತಿದೆ. ಸಚಿವಾಲಯ ಸರಕು ಹಾಗೂ ಸಾಗಣೆಗೆ ಸಾಕಷ್ಟು ರಿಯಾಯಿತಿ ನೀಡಿದ್ದು, ಹುಬ್ಬಳ್ಳಿ ವಿಭಾಗೀಯ ವ್ಯಾಪ್ತಿಯಲ್ಲಿ ಸರಕುಗಳನ್ನು ವಿದೇಶಕ್ಕೆ ರವಾನಿಸಲಾಗಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಂದ ಸಕ್ಕರೆ ರಫ್ತು ಮಾಡಲಾಗಿದ್ದು, ಮೊದಲ ಬಾರಿಗೆ ಬಾದಾಮಿಯಿಂದ ಸಕ್ಕರೆ ರವಾನಿಸಲಾಗಿದೆ’ ಎಂದರು.