ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಮುಳುಗಿ ನಾಲ್ವರ ಸಾವು

Last Updated 11 ನವೆಂಬರ್ 2019, 20:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ಮುಳುಗಿ ಮೃತಪಟ್ಟಿದ್ದಾರೆ.

ನಗರದ ಗಣೇಶಪೇಟೆ ಮೀನು ಮಾರುಕಟ್ಟೆಯ ನಿವಾಸಿಗಳಾದ ಅಯಾನ್ ಮೌಲಾಸಾಬ್ ಉಣಕಲ್ (19), ಸುಬಾನ್ ಅಹ್ಮದ್ ಹೊನ್ಯಾಳ (19), ಜುನೈದ್ ಮುಸ್ತಾಕ್ ಸಯ್ಯದ್ (20)‌‌ ಮತ್ತು ಸಯ್ಯದ್ ಸುಬಾನ್ ಸಯ್ಯದ್ ಅಲಿ ಬಿಲಾಲ್ (20) ಮೃತಪಟ್ಟವರು.

ಸೋಮವಾರ ಸಂಜೆ ಏಳು ಜನ ಸ್ನೇಹಿತರು ಸೇರಿ ಬೈಕ್ ಮೇಲೆ ದೇವರಿಗುಡಿಹಾಳ ಕೆರೆಗೆ ತೆರಳಿದ್ದರು. ಒಬ್ಬ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಅವನ ರಕ್ಷಣೆಗೆ ಮೂವರು ಧಾವಿಸಿದ್ದರು. ಈಜು ಬರದ ಕಾರಣ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಾಲ್ವರ ಮೃತ ದೇಹಗಳನ್ನು ಹೊರೆ ತೆಗೆಯಲಾಗಿದೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT