ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬೇಡಿಕೆ ವಿನಂತಿಗೆ ಓಗೊಟ್ಟ ವಾಣಿಜ್ಯನಗರದ ಬಮ್ಮಾಪುರ ಓಣಿಯ ಗಣಪತಿ ಮೂರ್ತಿ ಕಲಾವಿದ ವಿಜಯಕುಮಾರ ಕಾಂಬಳೆ ಅಪ್ಪು–ಗಣೇಶನ ಹತ್ತು ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಈ ಹತ್ತರಲ್ಲಿ ಮೂರು ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಉಳಿದವು ಹಾವೇರಿ, ರಾಣೆಬೆನ್ನೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಮಂಗಳೂರು, ಬೆಂಗಳೂರಿಗೆ ಹೋಗಲಿವೆ.