ಮೊದಲ ಚುನಾವಣೆಯಾದರೂ, ಎರಡನೇ ಬಾರಿ ಅಧಿಸೂಚನೆ ಹೊರಡಿಸಿರುವುದು ವಿಶೇಷ. ಹಿಂದಿನ ವರ್ಷ ಇಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಜಿಂದಾಲ್ ಸಂಸ್ಥೆಯ ಡಾಂಬರು ಕಾರ್ಖಾನೆ ಸ್ಥಾಪನೆಯನ್ನು ತಡೆಯುವವರೆಗೂ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.