<p><strong>ಹುಬ್ಬಳ್ಳಿ:</strong> ನಗರದ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್ನ ‘ನಾರ್ತ್ ಕರ್ನಾಟಕ ಸ್ಲೀಪ್ ಸೆಂಟರ್’ ವತಿಯಿಂದ ವೈದ್ಯರು ಹಾಗೂ ಸಿಬ್ಬಂದಿ ವಾಕಥಾನ್ ಮಾಡುವ ಮೂಲಕ ಶುಕ್ರವಾರ ‘ಜಾಗತಿಕ ನಿದ್ರಾ ದಿನ’ ಆಚರಿಸಿದರು. </p>.<p>ಬೆಳಿಗ್ಗೆ ತೋಳನಕೆರೆ ಉದ್ಯಾನದಿಂದ ನಿರಾಮಯ ಮೆಡಿಕಲ್ ಸೆಂಟರ್ ತನಕ ನಡೆದ ವಾಕಥಾನ್ಗೆ ಹೃದ್ರೋಗ ತಜ್ಞ ಜಿ.ಬಿ. ಸತ್ತೂರು ಚಾಲನೆ ನೀಡಿದರು. ವಾಕಥಾನ್ನಲ್ಲಿ ಭಾಗವಹಿಸಿದ್ದ ವೈದ್ಯರು ಹಾಗೂ ಸಿಬ್ಬಂದಿಯು ನಿದ್ರೆಯ ಮಹತ್ವ, ನಿದ್ರಾಹೀನತೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.</p>.<p>ನಂತರ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೃದ್ರೋಗ ತಜ್ಞ ಅಮಿತ್ ಸತ್ತೂರು, ‘ಪ್ರತಿಯೊಬ್ಬರೂ ಕಡ್ಡಾಯವಾಗಿ ನಿತ್ಯ 7 ತಾಸು ನಿದ್ರೆ ಮಾಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು. </p>.<p>‘ಒತ್ತಡದ ಬದುಕಿನಿಂದಾಗಿ ಹಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೃದ್ರೋಗ, ಮಧುಮೇಹ, ನರದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಾಢ ನಿದ್ರೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದರು. </p>.<p>ಡಾ.ದತ್ತು ನಾಡಿಗೇರ, ಡಾ.ಹರೀಶ್ ಜೋಶಿ ಮಾತನಾಡಿ, ‘ನಿದ್ರೆ ವೇಳೆ ಉಸಿರಾಟ ಸಮಸ್ಯೆ, ಗೊರಕೆ ಹೊಡೆಯುವುದು ಹಾಗೂ ನಿದ್ರಾಹೀನತೆ ಇವೆಲ್ಲವೂ ಅನಾರೋಗ್ಯದ ಲಕ್ಷಣ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಹ ಅಪಾಯಕಾರಿ. ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು’ ಎಂದು ತಿಳಿಸಿದರು.</p>.<p>ಡಾ.ಆರ್.ಐ. ದುಗ್ಗಾಣಿ, ಡಾ. ಗೋವಿಂದ ದೇಸಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್ನ ‘ನಾರ್ತ್ ಕರ್ನಾಟಕ ಸ್ಲೀಪ್ ಸೆಂಟರ್’ ವತಿಯಿಂದ ವೈದ್ಯರು ಹಾಗೂ ಸಿಬ್ಬಂದಿ ವಾಕಥಾನ್ ಮಾಡುವ ಮೂಲಕ ಶುಕ್ರವಾರ ‘ಜಾಗತಿಕ ನಿದ್ರಾ ದಿನ’ ಆಚರಿಸಿದರು. </p>.<p>ಬೆಳಿಗ್ಗೆ ತೋಳನಕೆರೆ ಉದ್ಯಾನದಿಂದ ನಿರಾಮಯ ಮೆಡಿಕಲ್ ಸೆಂಟರ್ ತನಕ ನಡೆದ ವಾಕಥಾನ್ಗೆ ಹೃದ್ರೋಗ ತಜ್ಞ ಜಿ.ಬಿ. ಸತ್ತೂರು ಚಾಲನೆ ನೀಡಿದರು. ವಾಕಥಾನ್ನಲ್ಲಿ ಭಾಗವಹಿಸಿದ್ದ ವೈದ್ಯರು ಹಾಗೂ ಸಿಬ್ಬಂದಿಯು ನಿದ್ರೆಯ ಮಹತ್ವ, ನಿದ್ರಾಹೀನತೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.</p>.<p>ನಂತರ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೃದ್ರೋಗ ತಜ್ಞ ಅಮಿತ್ ಸತ್ತೂರು, ‘ಪ್ರತಿಯೊಬ್ಬರೂ ಕಡ್ಡಾಯವಾಗಿ ನಿತ್ಯ 7 ತಾಸು ನಿದ್ರೆ ಮಾಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು. </p>.<p>‘ಒತ್ತಡದ ಬದುಕಿನಿಂದಾಗಿ ಹಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೃದ್ರೋಗ, ಮಧುಮೇಹ, ನರದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಗಾಢ ನಿದ್ರೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದರು. </p>.<p>ಡಾ.ದತ್ತು ನಾಡಿಗೇರ, ಡಾ.ಹರೀಶ್ ಜೋಶಿ ಮಾತನಾಡಿ, ‘ನಿದ್ರೆ ವೇಳೆ ಉಸಿರಾಟ ಸಮಸ್ಯೆ, ಗೊರಕೆ ಹೊಡೆಯುವುದು ಹಾಗೂ ನಿದ್ರಾಹೀನತೆ ಇವೆಲ್ಲವೂ ಅನಾರೋಗ್ಯದ ಲಕ್ಷಣ. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಹ ಅಪಾಯಕಾರಿ. ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು’ ಎಂದು ತಿಳಿಸಿದರು.</p>.<p>ಡಾ.ಆರ್.ಐ. ದುಗ್ಗಾಣಿ, ಡಾ. ಗೋವಿಂದ ದೇಸಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>