ಆರೋಪಿತರಾದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿಯ ವಿಜಯ ಮಿರಾಶಿ, ರಾಘವೇಂದ್ರ ಗೊಂದಿ, ಸಂಜಯ ಮಿರಾಶಿ, ಪ್ರಕಾಶ ಮಿರಾಶಿ, ಪರಶುರಾಮ ಚಲವಾದಿ, ಆನಂದ ಕುರಿ, ವಿನಾಯಕ ತಣೇಕರ ಹಾಗೂ ಇತರೆ 60 ಜನರ ಸೇರಿ ವಿಠ್ಠು ಹಾಗೂ ಲಕ್ಕು ಗಾವಡೆ ಮೇಲೆ ಹಲ್ಲೆಮಾಡಿದವರು ಎನ್ನಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ್ ತನಿಖೆ ನಡೆಸುತ್ತಿದ್ದಾರೆ.