<p>ಗುಡಗೇರಿ: ಗ್ರಾಮದ 1008 ಶಾಂತಿನಾಥ ತೀರ್ಥಂಕರ ನೂತನ ಬಸದಿಯಲ್ಲಿ ಪಂಚ ಕಲ್ಯಾಣ ಮಹೋತ್ಸವದ 48ನೇ ದಿನದ ಸರ್ವದೋಷ ಪ್ರಾಯಶ್ಚಿತ ನಿವಾರಣೆ ಪೂಜೆ ಬುಧವಾರ ಜರುಗಿತು.</p>.<p>ಬಸದಿಯ ಮೂಲ ನಾಯಕನಾದ ಶಾಂತಿನಾಥ ಪಂಚಾಮೃತ ಅಭಿಷೇಕ 108 ಪ್ರಾಯಶ್ಚಿತ ಅರ್ಗ್ಯ. 108 ಕಳಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪಂಚ ಕಲ್ಯಾಣ ಪ್ರತಿಷ್ಠಾಚಾರ್ಯ ಪವನ ಪಂಡಿತ, ಸ್ಥಾನಿಕ ಪಂಡಿತ ರವಿ ಕುಲಕರ್ಣಿ ನೆರವೇರಿಸಿದರು.</p>.<p>ಚತುರ್ಮುಖ ಜಿನಬಿಂಬಕ್ಕೆ ಶ್ರಾವಕ, ಶ್ರಾವಕಿಯರು ಕಳಶಾಭಿಷೇಕ ನೆರವೇರಿಸಿದರು. ಸಂಜೆ ಅಲಂಕೃತಗೊಂಡ ಟ್ರ್ಯಾಕ್ಟರ್ನಲ್ಲಿ ಮಹಾವೀರ ತೀರ್ಥಂಕರ ಭಾವಚಿತ್ರ, ಉತ್ಸವ ಮೂರ್ತಿ ಶಾಂತಿನಾಥ ತೀರ್ಥಂಕರನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p>ದಾರಿಯುದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸಿದರು. ಮೆರೆವಣಿಯಲ್ಲಿ ಬೋಲೋ ಮಹಾವೀರ ಭಗವಾನ ಕೀ ಜೈ... ಅಹಿಂಸಾ ಧರ್ಮ ಕೀ ಜೈ... ಜೈ ಘೋಷಣೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು, ನೂರಾರು ಶ್ರಾವಕ, ಶ್ರಾವಕಿಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-24-1492650140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಡಗೇರಿ: ಗ್ರಾಮದ 1008 ಶಾಂತಿನಾಥ ತೀರ್ಥಂಕರ ನೂತನ ಬಸದಿಯಲ್ಲಿ ಪಂಚ ಕಲ್ಯಾಣ ಮಹೋತ್ಸವದ 48ನೇ ದಿನದ ಸರ್ವದೋಷ ಪ್ರಾಯಶ್ಚಿತ ನಿವಾರಣೆ ಪೂಜೆ ಬುಧವಾರ ಜರುಗಿತು.</p>.<p>ಬಸದಿಯ ಮೂಲ ನಾಯಕನಾದ ಶಾಂತಿನಾಥ ಪಂಚಾಮೃತ ಅಭಿಷೇಕ 108 ಪ್ರಾಯಶ್ಚಿತ ಅರ್ಗ್ಯ. 108 ಕಳಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪಂಚ ಕಲ್ಯಾಣ ಪ್ರತಿಷ್ಠಾಚಾರ್ಯ ಪವನ ಪಂಡಿತ, ಸ್ಥಾನಿಕ ಪಂಡಿತ ರವಿ ಕುಲಕರ್ಣಿ ನೆರವೇರಿಸಿದರು.</p>.<p>ಚತುರ್ಮುಖ ಜಿನಬಿಂಬಕ್ಕೆ ಶ್ರಾವಕ, ಶ್ರಾವಕಿಯರು ಕಳಶಾಭಿಷೇಕ ನೆರವೇರಿಸಿದರು. ಸಂಜೆ ಅಲಂಕೃತಗೊಂಡ ಟ್ರ್ಯಾಕ್ಟರ್ನಲ್ಲಿ ಮಹಾವೀರ ತೀರ್ಥಂಕರ ಭಾವಚಿತ್ರ, ಉತ್ಸವ ಮೂರ್ತಿ ಶಾಂತಿನಾಥ ತೀರ್ಥಂಕರನ್ನು ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.</p>.<p>ದಾರಿಯುದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ಅರ್ಪಿಸಿದರು. ಮೆರೆವಣಿಯಲ್ಲಿ ಬೋಲೋ ಮಹಾವೀರ ಭಗವಾನ ಕೀ ಜೈ... ಅಹಿಂಸಾ ಧರ್ಮ ಕೀ ಜೈ... ಜೈ ಘೋಷಣೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು, ನೂರಾರು ಶ್ರಾವಕ, ಶ್ರಾವಕಿಯರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-24-1492650140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>