ಶಿರಡಿ ಸಾಯಿ ಸದ್ಭಕ್ತ ಮಂಡಳಿಯ ಅಧ್ಯಕ್ಷ ಡಾ. ಟಿ.ಎಸ್. ಮೋಹನಕುಮಾರ ಮಾತನಾಡಿ, ‘ಭಕ್ತರಿಂದಾಗಿ ಸಾಯಿ ಮಂದಿರದಲ್ಲಿ ಬಾಬಾರಿಗೆ ನಿತ್ಯ ಸೇವಾ ಕೈಂಕರ್ಯಗಳು ನೆರವೇರುತ್ತಿವೆ. ಗುರುಪೂರ್ಣಿಮಾ ಉತ್ಸವದ ನಿಮಿತ್ತ ಜುಲೈ 10ರಿಂದ 16ರವರೆಗೆ ‘ಶ್ರೀ ಸಾಯಿ ದಿವ್ಯ ಚರಿತ್ರೆ ಪಾರಾಯಣ ಪಠಣ’ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಾಬಾರ ಕೃಪೆಗೆ ಪಾತ್ರವಾಗಬೇಕು’ ಎಂದು ಮನವಿ ಮಾಡಿದರು.