ಎಸ್.ಎಸ್.ಕೆ. ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚಸಮಿತಿ ಗೌರವ ಕಾರ್ಯದರ್ಶಿ ಕಿಶೋರ ಆರ್. ಜಿತೂರಿ ‘ಮೆರವಣಿಗೆಯು ಮ್ಯಾದಾರ ಓಣಿ, ದುರ್ಗದ ಬೈಲ್, ನ್ಯೂ ಮೈಸೂರು ಸ್ಟೋರ್, ಪೆಂಡಾರ್ ಗಲ್ಲಿ, ಮಹಾವೀರ ಓಣಿ, ಕಮರಿಪೇಟೆ, ಬೋಗಾರ ಓಣಿ, ಮೂರು ಸಾವಿರ ಮಠದ ಮೂಲಕ ಮರಳಿ ದೇವಸ್ಥಾನಕ್ಕೆ ಮರಳಲಿದೆ. ಎಲ್ಲ ಸಮಾಜದ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.