‘ಮಳೆಗೆ ಊರಿನಲ್ಲಿ ಹಲವು ಮನೆಗಳು ಕುಸಿದಿದ್ದರಿಂದ ಆ ಮನೆಗಳ ಕುಟುಂಬ ಸದಸ್ಯರು ಹಾಗೂ 15ಕ್ಕೂ ಹೆಚ್ಚು ಮಕ್ಕಳು ದೇವಸ್ಥಾನದಲ್ಲೇ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದರು. ರಾತ್ರಿ ದೇಗುಲದ ಸಭಾಂಗಣದಲ್ಲಿ ಇರಲು ಸ್ಥಳವಿರಲಿಲ್ಲ. ಹಾಗಾಗಿ, ಗರ್ಭಗುಡಿ ಪಕ್ಕವೇ ಸಣ್ಣ ಮಂಚವನ್ನು ಇಟ್ಟು ಅದರ ಸುತ್ತ, ಟಾರ್ಪಲಿನ್ನಿಂದ ಟೆಂಟ್ ನಿರ್ಮಿಸಿ ತಾಯಿ ಮತ್ತು ಮಗು ಮಲಗಲು ವ್ಯವಸ್ಥೆ ಮಾಡಿದೆವು’ ಎಂದು ಹೇಳಿದರು.