ಹುಬ್ಬಳ್ಳಿ: ರೈಲು ಸಂಚಾರದ ವೇಳೆ ನಡೆಯಲಿದ್ದ ಅನಾಹುತವನ್ನುಸಮಯಪ್ರಜ್ಞೆಯಿಂದ ತಪ್ಪಿಸಿದ ರೈಲ್ವೆ ಸಿಬ್ಬಂದಿಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಗುರುವಾರ ಗೌರವಿಸಿದರು.
ರೈಲ್ವೆ ಸಿಬ್ಬಂದಿಯಾದ ಅತುಲ್ ಬಿ. ಯಾದವ್, ಬಹದ್ದೂರ್ ಸಿಂಗ್ ಶಿಖಾವತ್, ವಿಕಾಸ್ ಕುಮಾರ್, ನಿಂಗೇಗೌಡ, ಅಮಿತ್ ಸಿಂಗ್ ಚೌಹಾಣ್, ಎನ್. ಸುರೇಶ್ ಅವರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಪ್ರಧಾನ ಮುಖ್ಯ ಭದ್ರತಾ ಅಧಿಕಾರಿ ಅಲೋಕ್ ತಿವಾರಿ ಇದ್ದರು.