‘ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಗಂಗೂಬಾಯಿ ಅವರು ಈ ದೇಶದ ಆಸ್ತಿ. ಗಂಗೂಬಾಯಿ ಅವರ ಪೂರ್ವಜರ ಮನೆ ಶಿಥಿಲಾವಸ್ಥೆಯಲ್ಲಿರುವ ವಿಷಯ ಗೊತ್ತಿರಲಿಲ್ಲ. ಅವರು ನನಗೆ ತಾಯಿ ಇದ್ದಂತೆ. ಅವರೊಂದಿಗೆ ಹೆಚ್ಚು ಒಡನಾಟವಿತ್ತು. ಫೆ. 10ರಿಂದ ಅಧಿವೇಶನ ನಡೆಯಲಿದ್ದು, ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನೆ ಜೀರ್ಣೋದ್ಧಾರ ಕಾಮಗಾರ ಕೈಗೊಳ್ಳಲು ನಿರ್ದೇಶನ ನೀಡುತ್ತೇನೆ’ ಎಂದು ಹೇಳಿದರು.