<p><strong>ಹುಬ್ಬಳ್ಳಿ:</strong> ನಗರದಲ್ಲಿ ಮಂಗಳವಾರ ಸಂಜೆಯಿಂದ ರಾತ್ರಿಯ ತನಕ ಬಿಟ್ಟು ಬಿಟ್ಟು ಮಳೆ ಸುರಿಯಿತು.</p><p>ಬೆಳಿಗ್ಗೆಯಿಂದ ಮಧ್ಯಾಹ್ನ 2ರ ವರೆಗೆ ಬಿರು ಬಿಸಿಲಿನ ವಾತಾವರಣವಿತ್ತು. ನಂತರ ಮೋಡಕವಿದ ವಾತಾವರಣ ಉಂಟಾದ ಪರಿಣಾಮ ಏಕಾಏಕಿ 1 ತಾಸಿಗೂ ಅಧಿಕ ಸಮಯ ಆಲಿಕಲ್ಲು ಸಹಿತ ಜೋರು ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಸಂಜೆ ಸುರಿದ ಮಳೆಯು ತುಸು ತಂಪು ನೀಡಿತು. ರಾತ್ರಿಯ ತನಕವೂ ಗುಡುಗು ಸಿಡಿಲು ಸಹಿತ ಆಗಾಗ ಮಳೆ ಸುರಿಯಿತು.</p><p>ದುರ್ಗದ ಬೈಲ್ ಮಾರುಕಟ್ಟೆ ಪ್ರದೇಶ, ಹಳೇ ಹುಬ್ಬಳ್ಳಿಯ ಯಲ್ಲಾಪುರ ಓಣಿ, ಎಸ್.ಎಂ.ಕೃಷ್ಣ ನಗರ, ದಾಜಿಬಾನ ಪೇಟೆಯಲ್ಲಿನ ರಾಜಕಾಲುವೆ, ಹೆಗ್ಗೇರಿ ಗುಡಿ ಪ್ಲಾಟ್ನ ಬಸವನಗರ ಸೇರಿದಂತೆ ಹಳೇ ಹುಬ್ಬಳ್ಳಿಯ ತೆಗ್ಗು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನಿಂತಿತ್ತು. ಮಳೆಯಿಂದಾಗಿ ವಾರ್ಡ್ ನಂ 39ರಲ್ಲಿನ ರಾಜನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಕೊಳಚೆ ನೀರು ನುಗ್ಗಿದ ಘಟನೆಯೂ ನಡೆಯಿತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು.</p><p>ಮಳೆಯಿಂದಾಗಿ ಲಿಂಗರಾಜ ನಗರದಲ್ಲಿ ನಡೆಯುತ್ತಿದ್ದ ವಾರದ ಸಂತೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಯಿತು. ವ್ಯಾಪಾರಿಗಳು, ರೈತರು ರಸ್ತೆ ಬದಿಯಲ್ಲಿ ಮಾರಲು ಇಟ್ಟಿದ್ದ ತರಕಾರಿಯಲ್ಲಿಯೇ ಕೆಲ ಸಮಯ ಮಳೆ ನೀರು ಹರಿಯಿತು. ಕೆಲ ರೈತರು, ವ್ಯಾಪಾರಿಗಳು ತರಕಾರಿಗಳ ಮೂಟೆಯನ್ನು ಹೊತ್ತು ಸಾಗಿದರು. ತರಕಾರಿ ಖರೀದಿಸಲು ಬಂದಿದ್ದ ಜನರು ಅಂಗಡಿಗಳ ಮುಂದಿ ಮಳೆಯಿಂದ ರಕ್ಷಣೆ ಪಡೆದಿದ್ದು ಕಂಡುಬಂದಿತು.</p><h2><strong>ಯುಗಾದಿ ಹಬ್ಬದ ಖರೀದಿಗೆ ಅಡ್ಡಿ:</strong> </h2><p>ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ದರ್ಗಾದ ಬೈಲ್ ಮಾರುಕಟ್ಟೆ, ಜನತಾಬಜಾರ್ ಮಾರ್ಕೆಟ್, ಕೇಶ್ವಾಪುರ ಮಾರ್ಕೆಟ್ ಪ್ರದೇಶ ಸೇರಿದಂತೆ ನಗರದಲ್ಲಿ ಕೆಲ ಮಾರ್ಕೆಟ್ ಪ್ರದೇಶಗಳಲ್ಲಿ ನಡೆಯುತ್ತಿದ್ದ ವ್ಯಾಪಾರಕ್ಕೂ ಅಡಚಣೆ ಉಂಟಾಯಿತು.</p><p>ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಸುತ್ತಮತ್ತ ಹಾಗೂ ಕಾರವಾರ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ನಗರದ ಕೆಲವೆಡೆ ಮಳೆ ನೀರು ನಿಂತ ಪರಿಣಾಮ ವಾಹನಗಳ ಹಾಗೂ ಜನರ ಸಂಚಾರಕ್ಕೆ ಕೆಲ ಸಮಯ ಅಡಚಣೆ ಉಂಟಾಯಿತು.</p><h2><strong>ಮಾರ್ಚ್ 20ರ ತನಕ ಮಳೆ ಸಾಧ್ಯತೆ:</strong></h2><p> ‘ಧಾರವಾಡ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಉತ್ತರ ಕನ್ನಡ ಹಾಗೂ ಬೆಳಗಾವಿ ಸೇರಿದಂತೆ ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಜಿಲ್ಲೆಗಳಲ್ಲಿ ಮಾರ್ಚ್ 20ರ ತನಕ ಮಳೆಯಾಗುವ ಸಾಧ್ಯತೆ ಇದೆ. ಇದು ಪೂರ್ವ ಮುಂಗಾರು, ಮುಂಗಾರು ಅವಧಿಯಲ್ಲ. ಬೇಸಿಗೆಯ ಆರಂಭದ ದಿನಗಳಾಗಿದ್ದು, ವಾತಾವರಣದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಧಿಕ ತಾಪಮಾನ ಏರಿಕೆಯಿಂದಾಗಿ ಪ್ರಾದೇಶಿಕವಾಗಿ ಮೋಡ ಉಂಟಾಗಿ ಏಕಾಏಕಿ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ ಹೇಳಿದರು.</p><h2><strong>ಇಳೆಗೆ ತಂಪೆರೆದ ಮಳೆ</strong></h2><p>ಧಾರವಾಡ: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಳೆ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಇತ್ತು. ತಾಲ್ಲೂಕಿನ ಹಳೇ ತೇಗೂರಿನಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಸಾವಿಗೀಡಾಗಿದೆ.</p><p>ಸಂಜೆ ಸುಮಾರು 20 ನಿಮಿಷ ಮಳೆ ಸುರಿಯಿತು. ಗಾಳಿಯ ಆರ್ಭಟ ಇತ್ತು. ಕೆಲವೆಡೆ ರಸ್ತೆ ತಗ್ಗುಗಳಲ್ಲಿ ನೀರು ಆವರಿಸಿತ್ತು. ಕೆಲವು ಬೀದಿ ಬದಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ನೆನೆಯುತ್ತಲೇ ಮನೆಗಳಿಗೆ ಸಾಗಿದರು.</p><p>ಗಾಳಿಯ ರಭಸಕ್ಕೆ ಕೆಲವೆಡೆ ಮರಗಳ ಟೊಂಗೆಗಳು ಮುರಿದುಬಿದ್ದಿದ್ದವು. ಬೇಸಿಗೆ ಬಿಸಿಲಿಗೆ ಕಾದಿದ್ದ ಇಳೆಗೆ ಮಳೆ ತಂಪೆರೆಯಿತು.</p><h2><strong>ಆಲಿಕಲ್ಲು ಸಹಿತ ಧಾರಾಕಾರ ಮಳೆ</strong></h2><p>ಅಳ್ನಾವರ: ತಾಲ್ಲೂಕಿನ ಹೊನ್ನಾಪುರ, ಬೆಣಚಿ, ಕುಂಬಾರಕೊಪ್ಪ, ಕಂಬಾರಗಣವಿ, ಅರವಟಗಿ, ಡೋರಿ ಸೇರಿ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.</p><p>ಮಳೆಯಿಂದಾಗಿ ಸಂತೆಗೆ ಬಂದಿದ್ದ ಜನ ಹಾಗೂ ವಿದ್ಯಾರ್ಥಿಗಳು ಮನೆ ಸೇರಲು ಪರದಾಡಿದರು. ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿ, ಅಂಗಡಿಗಳ ಬಳಿ ಆಶ್ರಯ ಪಡೆದರು. ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.</p><p>ಮಕ್ಕಳು ಮಳೆಯಲ್ಲಿ ನೆನೆದು, ಆಲಿಕಲ್ಲು ಸಂಗ್ರಹಿಸಿ ಸಂತಸ ಪಟ್ಟರು. ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಹೀಗಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು.</p><p>‘ವಿವಿಧಡೆ ಯುಗಾದಿ ಹಬ್ಬಕ್ಕೆ ತಯಾರಿ ನಡೆದಿದೆ. ಯುಗಾದಿಯಂದು ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ನಂತರ ಬಿತ್ತನೆಗೆ ಭೂಮಿ ಹದ ಮಾಡಲು ಈ ಮಳೆ ಸಹಕಾರಿಯಾಗಲಿದೆ’ ಎಂದು ಬೆಣಚಿ ಗ್ರಾಮದ ರೈತ ಮಲ್ಲನಗೌಡ ಪಾಟೀಲ ತಿಳಿಸಿದರು.</p><p>‘ಮಳೆಯಿಂದಾಗಿ ಕಬ್ಬು ಬೆಳೆಗೆ ಅನುಕೂಲವಾಗಲಿದೆ’ ಎಂದು ಕಂಬಾರಗಣವಿ ರೈತ ಅಶೋಕ ಜೋಡಟ್ಟಿ ಹೇಳಿದರು. ಸಮೀಪದ ಹೊನ್ನಾಪುರ ಗ್ರಾಮದ ಹೊರ ವಲಯದ ಹಳ್ಳ ತುಂಬಿ ಹರಿಯಿತು.</p> <h2>ಮಾವು ಬೆಳೆಯ ಮೇಲೆ ಪರಿಣಾಮ</h2><p>‘ಆಲಿಕಲ್ಲು ಮಳೆ ಮತ್ತು ಗಾಳಿ ಸಹಿತ ಜೋರು ಮಳೆ ಸುರಿದ ಪ್ರದೇಶಗಳಲ್ಲಿನ ಮಾವಿನ ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿಂದೆ ಸುರಿದ ಮಳೆಯಿಂದಾಗಿ ಮಾವಿನ ಹೂವುಗಳು ಉದುರಿದ್ದವು. ಇದೀಗ ಮತ್ತೆ ಆಲಿಕಲ್ಲು ಸಹಿತ ಜೋರು ಮಳೆ ಸುರಿದ ಪರಿಣಾಮ ಮಾವಿನ ಸಣ್ಣ ಕಾಯಿಗಳು ಕಳಚಿ ಬೀಳುತ್ತವೆ‘ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ.</p><p>‘ಮಳೆಯಿಂದ ಹೆಚ್ಚಾಗುವ ವಾತಾವರಣದಲ್ಲಿನ ಆದ್ರತೆಯಿಂದ ಮಾವಿಗೆ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಫಸಲಿನ ಇಳುವರಿ ಕಡಿಮೆ ಮಾಡುತ್ತದೆ. ಹಣ್ಣಿನ ಗುಣಮಟ್ಟವನ್ನೂ ಹಾಳು ಮಾಡುತ್ತದೆ. ಇದರಿಂದ ಮಾವಿನ ಬೆಳೆಗಾರರಿಗೆ ನಷ್ಟವಾಗುತ್ತದೆ. ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆಗಾರರು ಈಗಾಗಲೇ ಆತಂಕಕ್ಕೆ ಒಳಗಾಗಿದ್ದಾರೆ’ ಎನ್ನುತ್ತಾರೆ ಅವರು. </p>.<h2>ಸಿಡಿಲು ಬಡಿದು ಎಮ್ಮೆ ಸಾವು</h2><p>ನವಲಗುಂದ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಭಾರಿ ಗಾಳಿ, ಸಿಡಿಲು, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆಯಿತು.</p><p>ದಾಟನಾಳ ಗ್ರಾಮದದಲ್ಲಿ ಸಿಡಿಲು ಬಡಿದು ಶೇಖಪ್ಪ ಹೂಗಾರ ಅವರ ಎಮ್ಮೆ ಸಾವನ್ನಪ್ಪಿದೆ. ಭೋಗಾನೂರು ಗ್ರಾಮದಲ್ಲಿ ಮರವೊಂದು ಮನೆ ಮೇಲೆ ಬಿದ್ದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.</p><p>ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗಾಳಿಗೆ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಕೆಲವು ರೈತರ ಕುಸುಬಿ ಫಸಲು ಇನ್ನೂ ಜಮೀನಲ್ಲಿರುವುದರಿಂದ ನಷ್ಟದ ಆತಂಕ ರೈತರನ್ನು ಕಾಡುತ್ತಿದೆ.</p><p>ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಅಂಗಡಿಗಳ ಬಳಿ ಆಶ್ರಯ ಪಡೆದರು. ಕೆಲವರು ಮಳೆಯಲ್ಲೇ ನೆನೆಯುತ್ತಾ ಸಂಚರಿಸಿದ್ದು ಕಂಡುಬಂತು.</p> .<div><blockquote>ಬಂಗಾಳಕೊಲ್ಲಿಯಲ್ಲಿ ಉಂಟಾದ ಸೈಕ್ಲೋನ್ ಪರಿಣಾಮದಿಂದ ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.</blockquote><span class="attribution">ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದಲ್ಲಿ ಮಂಗಳವಾರ ಸಂಜೆಯಿಂದ ರಾತ್ರಿಯ ತನಕ ಬಿಟ್ಟು ಬಿಟ್ಟು ಮಳೆ ಸುರಿಯಿತು.</p><p>ಬೆಳಿಗ್ಗೆಯಿಂದ ಮಧ್ಯಾಹ್ನ 2ರ ವರೆಗೆ ಬಿರು ಬಿಸಿಲಿನ ವಾತಾವರಣವಿತ್ತು. ನಂತರ ಮೋಡಕವಿದ ವಾತಾವರಣ ಉಂಟಾದ ಪರಿಣಾಮ ಏಕಾಏಕಿ 1 ತಾಸಿಗೂ ಅಧಿಕ ಸಮಯ ಆಲಿಕಲ್ಲು ಸಹಿತ ಜೋರು ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಸಂಜೆ ಸುರಿದ ಮಳೆಯು ತುಸು ತಂಪು ನೀಡಿತು. ರಾತ್ರಿಯ ತನಕವೂ ಗುಡುಗು ಸಿಡಿಲು ಸಹಿತ ಆಗಾಗ ಮಳೆ ಸುರಿಯಿತು.</p><p>ದುರ್ಗದ ಬೈಲ್ ಮಾರುಕಟ್ಟೆ ಪ್ರದೇಶ, ಹಳೇ ಹುಬ್ಬಳ್ಳಿಯ ಯಲ್ಲಾಪುರ ಓಣಿ, ಎಸ್.ಎಂ.ಕೃಷ್ಣ ನಗರ, ದಾಜಿಬಾನ ಪೇಟೆಯಲ್ಲಿನ ರಾಜಕಾಲುವೆ, ಹೆಗ್ಗೇರಿ ಗುಡಿ ಪ್ಲಾಟ್ನ ಬಸವನಗರ ಸೇರಿದಂತೆ ಹಳೇ ಹುಬ್ಬಳ್ಳಿಯ ತೆಗ್ಗು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ನಿಂತಿತ್ತು. ಮಳೆಯಿಂದಾಗಿ ವಾರ್ಡ್ ನಂ 39ರಲ್ಲಿನ ರಾಜನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಕೊಳಚೆ ನೀರು ನುಗ್ಗಿದ ಘಟನೆಯೂ ನಡೆಯಿತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು.</p><p>ಮಳೆಯಿಂದಾಗಿ ಲಿಂಗರಾಜ ನಗರದಲ್ಲಿ ನಡೆಯುತ್ತಿದ್ದ ವಾರದ ಸಂತೆಯು ಸಂಪೂರ್ಣವಾಗಿ ಅಸ್ತವ್ಯಸ್ತವಾಯಿತು. ವ್ಯಾಪಾರಿಗಳು, ರೈತರು ರಸ್ತೆ ಬದಿಯಲ್ಲಿ ಮಾರಲು ಇಟ್ಟಿದ್ದ ತರಕಾರಿಯಲ್ಲಿಯೇ ಕೆಲ ಸಮಯ ಮಳೆ ನೀರು ಹರಿಯಿತು. ಕೆಲ ರೈತರು, ವ್ಯಾಪಾರಿಗಳು ತರಕಾರಿಗಳ ಮೂಟೆಯನ್ನು ಹೊತ್ತು ಸಾಗಿದರು. ತರಕಾರಿ ಖರೀದಿಸಲು ಬಂದಿದ್ದ ಜನರು ಅಂಗಡಿಗಳ ಮುಂದಿ ಮಳೆಯಿಂದ ರಕ್ಷಣೆ ಪಡೆದಿದ್ದು ಕಂಡುಬಂದಿತು.</p><h2><strong>ಯುಗಾದಿ ಹಬ್ಬದ ಖರೀದಿಗೆ ಅಡ್ಡಿ:</strong> </h2><p>ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ದರ್ಗಾದ ಬೈಲ್ ಮಾರುಕಟ್ಟೆ, ಜನತಾಬಜಾರ್ ಮಾರ್ಕೆಟ್, ಕೇಶ್ವಾಪುರ ಮಾರ್ಕೆಟ್ ಪ್ರದೇಶ ಸೇರಿದಂತೆ ನಗರದಲ್ಲಿ ಕೆಲ ಮಾರ್ಕೆಟ್ ಪ್ರದೇಶಗಳಲ್ಲಿ ನಡೆಯುತ್ತಿದ್ದ ವ್ಯಾಪಾರಕ್ಕೂ ಅಡಚಣೆ ಉಂಟಾಯಿತು.</p><p>ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಸುತ್ತಮತ್ತ ಹಾಗೂ ಕಾರವಾರ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ನಗರದ ಕೆಲವೆಡೆ ಮಳೆ ನೀರು ನಿಂತ ಪರಿಣಾಮ ವಾಹನಗಳ ಹಾಗೂ ಜನರ ಸಂಚಾರಕ್ಕೆ ಕೆಲ ಸಮಯ ಅಡಚಣೆ ಉಂಟಾಯಿತು.</p><h2><strong>ಮಾರ್ಚ್ 20ರ ತನಕ ಮಳೆ ಸಾಧ್ಯತೆ:</strong></h2><p> ‘ಧಾರವಾಡ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಉತ್ತರ ಕನ್ನಡ ಹಾಗೂ ಬೆಳಗಾವಿ ಸೇರಿದಂತೆ ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಜಿಲ್ಲೆಗಳಲ್ಲಿ ಮಾರ್ಚ್ 20ರ ತನಕ ಮಳೆಯಾಗುವ ಸಾಧ್ಯತೆ ಇದೆ. ಇದು ಪೂರ್ವ ಮುಂಗಾರು, ಮುಂಗಾರು ಅವಧಿಯಲ್ಲ. ಬೇಸಿಗೆಯ ಆರಂಭದ ದಿನಗಳಾಗಿದ್ದು, ವಾತಾವರಣದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಧಿಕ ತಾಪಮಾನ ಏರಿಕೆಯಿಂದಾಗಿ ಪ್ರಾದೇಶಿಕವಾಗಿ ಮೋಡ ಉಂಟಾಗಿ ಏಕಾಏಕಿ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ ಹೇಳಿದರು.</p><h2><strong>ಇಳೆಗೆ ತಂಪೆರೆದ ಮಳೆ</strong></h2><p>ಧಾರವಾಡ: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಳೆ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಇತ್ತು. ತಾಲ್ಲೂಕಿನ ಹಳೇ ತೇಗೂರಿನಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಸಾವಿಗೀಡಾಗಿದೆ.</p><p>ಸಂಜೆ ಸುಮಾರು 20 ನಿಮಿಷ ಮಳೆ ಸುರಿಯಿತು. ಗಾಳಿಯ ಆರ್ಭಟ ಇತ್ತು. ಕೆಲವೆಡೆ ರಸ್ತೆ ತಗ್ಗುಗಳಲ್ಲಿ ನೀರು ಆವರಿಸಿತ್ತು. ಕೆಲವು ಬೀದಿ ಬದಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ನೆನೆಯುತ್ತಲೇ ಮನೆಗಳಿಗೆ ಸಾಗಿದರು.</p><p>ಗಾಳಿಯ ರಭಸಕ್ಕೆ ಕೆಲವೆಡೆ ಮರಗಳ ಟೊಂಗೆಗಳು ಮುರಿದುಬಿದ್ದಿದ್ದವು. ಬೇಸಿಗೆ ಬಿಸಿಲಿಗೆ ಕಾದಿದ್ದ ಇಳೆಗೆ ಮಳೆ ತಂಪೆರೆಯಿತು.</p><h2><strong>ಆಲಿಕಲ್ಲು ಸಹಿತ ಧಾರಾಕಾರ ಮಳೆ</strong></h2><p>ಅಳ್ನಾವರ: ತಾಲ್ಲೂಕಿನ ಹೊನ್ನಾಪುರ, ಬೆಣಚಿ, ಕುಂಬಾರಕೊಪ್ಪ, ಕಂಬಾರಗಣವಿ, ಅರವಟಗಿ, ಡೋರಿ ಸೇರಿ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.</p><p>ಮಳೆಯಿಂದಾಗಿ ಸಂತೆಗೆ ಬಂದಿದ್ದ ಜನ ಹಾಗೂ ವಿದ್ಯಾರ್ಥಿಗಳು ಮನೆ ಸೇರಲು ಪರದಾಡಿದರು. ವಾಹನ ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿ, ಅಂಗಡಿಗಳ ಬಳಿ ಆಶ್ರಯ ಪಡೆದರು. ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.</p><p>ಮಕ್ಕಳು ಮಳೆಯಲ್ಲಿ ನೆನೆದು, ಆಲಿಕಲ್ಲು ಸಂಗ್ರಹಿಸಿ ಸಂತಸ ಪಟ್ಟರು. ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಹೀಗಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು.</p><p>‘ವಿವಿಧಡೆ ಯುಗಾದಿ ಹಬ್ಬಕ್ಕೆ ತಯಾರಿ ನಡೆದಿದೆ. ಯುಗಾದಿಯಂದು ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ನಂತರ ಬಿತ್ತನೆಗೆ ಭೂಮಿ ಹದ ಮಾಡಲು ಈ ಮಳೆ ಸಹಕಾರಿಯಾಗಲಿದೆ’ ಎಂದು ಬೆಣಚಿ ಗ್ರಾಮದ ರೈತ ಮಲ್ಲನಗೌಡ ಪಾಟೀಲ ತಿಳಿಸಿದರು.</p><p>‘ಮಳೆಯಿಂದಾಗಿ ಕಬ್ಬು ಬೆಳೆಗೆ ಅನುಕೂಲವಾಗಲಿದೆ’ ಎಂದು ಕಂಬಾರಗಣವಿ ರೈತ ಅಶೋಕ ಜೋಡಟ್ಟಿ ಹೇಳಿದರು. ಸಮೀಪದ ಹೊನ್ನಾಪುರ ಗ್ರಾಮದ ಹೊರ ವಲಯದ ಹಳ್ಳ ತುಂಬಿ ಹರಿಯಿತು.</p> <h2>ಮಾವು ಬೆಳೆಯ ಮೇಲೆ ಪರಿಣಾಮ</h2><p>‘ಆಲಿಕಲ್ಲು ಮಳೆ ಮತ್ತು ಗಾಳಿ ಸಹಿತ ಜೋರು ಮಳೆ ಸುರಿದ ಪ್ರದೇಶಗಳಲ್ಲಿನ ಮಾವಿನ ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿಂದೆ ಸುರಿದ ಮಳೆಯಿಂದಾಗಿ ಮಾವಿನ ಹೂವುಗಳು ಉದುರಿದ್ದವು. ಇದೀಗ ಮತ್ತೆ ಆಲಿಕಲ್ಲು ಸಹಿತ ಜೋರು ಮಳೆ ಸುರಿದ ಪರಿಣಾಮ ಮಾವಿನ ಸಣ್ಣ ಕಾಯಿಗಳು ಕಳಚಿ ಬೀಳುತ್ತವೆ‘ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ.</p><p>‘ಮಳೆಯಿಂದ ಹೆಚ್ಚಾಗುವ ವಾತಾವರಣದಲ್ಲಿನ ಆದ್ರತೆಯಿಂದ ಮಾವಿಗೆ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಫಸಲಿನ ಇಳುವರಿ ಕಡಿಮೆ ಮಾಡುತ್ತದೆ. ಹಣ್ಣಿನ ಗುಣಮಟ್ಟವನ್ನೂ ಹಾಳು ಮಾಡುತ್ತದೆ. ಇದರಿಂದ ಮಾವಿನ ಬೆಳೆಗಾರರಿಗೆ ನಷ್ಟವಾಗುತ್ತದೆ. ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆಗಾರರು ಈಗಾಗಲೇ ಆತಂಕಕ್ಕೆ ಒಳಗಾಗಿದ್ದಾರೆ’ ಎನ್ನುತ್ತಾರೆ ಅವರು. </p>.<h2>ಸಿಡಿಲು ಬಡಿದು ಎಮ್ಮೆ ಸಾವು</h2><p>ನವಲಗುಂದ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಭಾರಿ ಗಾಳಿ, ಸಿಡಿಲು, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆಯಿತು.</p><p>ದಾಟನಾಳ ಗ್ರಾಮದದಲ್ಲಿ ಸಿಡಿಲು ಬಡಿದು ಶೇಖಪ್ಪ ಹೂಗಾರ ಅವರ ಎಮ್ಮೆ ಸಾವನ್ನಪ್ಪಿದೆ. ಭೋಗಾನೂರು ಗ್ರಾಮದಲ್ಲಿ ಮರವೊಂದು ಮನೆ ಮೇಲೆ ಬಿದ್ದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ.</p><p>ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗಾಳಿಗೆ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಕೆಲವು ರೈತರ ಕುಸುಬಿ ಫಸಲು ಇನ್ನೂ ಜಮೀನಲ್ಲಿರುವುದರಿಂದ ನಷ್ಟದ ಆತಂಕ ರೈತರನ್ನು ಕಾಡುತ್ತಿದೆ.</p><p>ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಅಂಗಡಿಗಳ ಬಳಿ ಆಶ್ರಯ ಪಡೆದರು. ಕೆಲವರು ಮಳೆಯಲ್ಲೇ ನೆನೆಯುತ್ತಾ ಸಂಚರಿಸಿದ್ದು ಕಂಡುಬಂತು.</p> .<div><blockquote>ಬಂಗಾಳಕೊಲ್ಲಿಯಲ್ಲಿ ಉಂಟಾದ ಸೈಕ್ಲೋನ್ ಪರಿಣಾಮದಿಂದ ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.</blockquote><span class="attribution">ರವಿ ಪಾಟೀಲ ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>