<p><strong>ಹುಬ್ಬಳ್ಳಿ</strong>: ನಗರದ ವೀರಾಪುರ ಓಣಿಯ ಎರಡೆತ್ತಿನ ಮಠದ ಎದುರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು, ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. ‘ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ. ಅದಕ್ಕೆ ಸುಸಜ್ಜಿತ ರಸ್ತೆಯನ್ನು ಬೇಜವಾಬ್ದಾರಿಯಿಂದ ಅಗೆಯಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ’ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ.</p>.<p>‘2023ರಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ, ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದ್ದೆವು. ಅದನ್ನು ನೆರವೇರಿಸದೇ, ರಸ್ತೆ ನಿರ್ಮಿಸುವುದು ಬೇಡವೆಂದು ಆಗ್ರಹಿಸಿದ್ದೆವು’ ಎಂದು ಸ್ಥಳೀಯರು ತಿಳಿಸಿದರು.</p>.<p>ಆದರೆ, ಈಗ ರಸ್ತೆ ಅಗೆಯಲಾಗಿದೆ. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ₹50 ಲಕ್ಷ ಅನುದಾನದಲ್ಲಿ ಒಳಚರಂಡಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ.</p>.<p>‘ಸಾರ್ವಜನಿಕರ ತೆರಿಗೆ ಹಣ ಹೇಗೆ ಹಾಳು ಮಾಡಬೇಕು ಎಂಬುದನ್ನು ಹುಬ್ಬಳ್ಳಿಯ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಕಲಿಯಬೇಕು. ಹಾಳಾಗಿದ್ದ ಒಳಚರಂಡಿ ದುರಸ್ತಿ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿತ್ತು. ರಸ್ತೆ ನಿರ್ಮಿಸುವುದಕ್ಕೂ ಮುನ್ನ ಒಳಚರಂಡಿ ಸಮಸ್ಯೆ ಇರುವುದು ಅಧಿಕಾರಿಗಳಿಗೆ ಗೊತ್ತಿತ್ತು’ ಎಂದು ಎರಡೆತ್ತಿನ ಮಠದ ಬಳಿಯ ನಿವಾಸಿ ಲಕ್ಷ್ಮಣ ಹಿರೇಮಠ ಹೇಳಿದರು.</p>.<p>‘ವೀರಾಪುರ ಓಣಿ ರಸ್ತೆಯಲ್ಲಿರುವ ಮೂರು ಮ್ಯಾನ್ಹೋಲ್ಗಳು ತುಂಬಿ ಹರಿಯುತ್ತವೆ. ಮಳೆಗಾಲದಲ್ಲಂತೂ ಸಮಸ್ಯೆ ತೀವ್ರವಾಗುತ್ತದೆ. ಹೀಗಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಮುನ್ನ ಒಳಚರಂಡಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದೆವು. ಇಲಾಖೆಗಳ ನಡುವಿನ ಸಮನ್ವಯ ಇಲ್ಲ ಎನ್ನುವುದಕ್ಕೆ ರಸ್ತೆ ಅಗೆದಿರುವುದು ಸ್ಪಷ್ಟ ಉದಾಹರಣೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ವೀರಾಪುರ ಓಣಿ ರಸ್ತೆಯಲ್ಲಿನ ಒಳಚರಂಡಿ ಪೈಪ್ಲೈನ್ ಹಳೆಯದಾಗಿದ್ದು. ಹೀಗಾಗಿ ಸುತ್ತಲಿನ ನಿವಾಸಿಗಳ ಶೌಚಾಲಯದಲ್ಲಿ ಸಮಸ್ಯೆ ಎದುರಾಗುತ್ತಿತ್ತು. ದೂರುಗಳು ಬಂದ ಹಿನ್ನೆಲೆಯಲ್ಲಿ, ಕೆಆರ್ಐಡಿಎಲ್ ತುರ್ತಾಗಿ ಕಾಮಗಾರಿ ಕೈಗೊಂಡಿದೆ’ ಎಂದು ಹು–ಧಾ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ಆರ್. ತಿಳಿಸಿದರು.</p>.<p><strong>ಮನೆ ಮುಂದೆ ಮಣ್ಣಿನ ರಾಶಿ!</strong> </p><p>‘ವೀರಾಪುರ ಓಣಿಯಿಂದ ಯಲ್ಲಾಪುರ ಓಣಿಯ ಆಲ್ಫಾ ಹೋಟೆಲ್ವರೆಗೆ ಕಾಂಕ್ರೀಟ್ ರಸ್ತೆ ಅಗೆಯಲಾಗಿದ್ದು ಅದರ ಮಣ್ಣು ಮನೆಗಳು ಅಂಗಡಿಗಳ ಬಾಗಿಲವರೆಗೆ ಹರಡಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ಯಲ್ಲಾಪುರ ಓಣಿಯ ಸೈಯ್ಯದ್ ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದರು</p>.<div><blockquote>ಮಳೆಗಾಲ ಆರಂಭವಾಗುವ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಸಾರ್ವಜನಿಕರ ಸಹಕಾರ ಅಗತ್ಯ.</blockquote><span class="attribution">– ವಿಜಯಕುಮಾರ್, ಉಪ ಆಯುಕ್ತ (ಅಭಿವೃದ್ಧಿ) ಹು–ಧಾ ಮಹಾನಗರ ಪಾಲಿಕೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ನಗರದ ವೀರಾಪುರ ಓಣಿಯ ಎರಡೆತ್ತಿನ ಮಠದ ಎದುರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು, ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದೆ. ‘ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ. ಅದಕ್ಕೆ ಸುಸಜ್ಜಿತ ರಸ್ತೆಯನ್ನು ಬೇಜವಾಬ್ದಾರಿಯಿಂದ ಅಗೆಯಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ’ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ.</p>.<p>‘2023ರಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ, ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದ್ದೆವು. ಅದನ್ನು ನೆರವೇರಿಸದೇ, ರಸ್ತೆ ನಿರ್ಮಿಸುವುದು ಬೇಡವೆಂದು ಆಗ್ರಹಿಸಿದ್ದೆವು’ ಎಂದು ಸ್ಥಳೀಯರು ತಿಳಿಸಿದರು.</p>.<p>ಆದರೆ, ಈಗ ರಸ್ತೆ ಅಗೆಯಲಾಗಿದೆ. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್ಐಡಿಎಲ್) ₹50 ಲಕ್ಷ ಅನುದಾನದಲ್ಲಿ ಒಳಚರಂಡಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ.</p>.<p>‘ಸಾರ್ವಜನಿಕರ ತೆರಿಗೆ ಹಣ ಹೇಗೆ ಹಾಳು ಮಾಡಬೇಕು ಎಂಬುದನ್ನು ಹುಬ್ಬಳ್ಳಿಯ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಕಲಿಯಬೇಕು. ಹಾಳಾಗಿದ್ದ ಒಳಚರಂಡಿ ದುರಸ್ತಿ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿತ್ತು. ರಸ್ತೆ ನಿರ್ಮಿಸುವುದಕ್ಕೂ ಮುನ್ನ ಒಳಚರಂಡಿ ಸಮಸ್ಯೆ ಇರುವುದು ಅಧಿಕಾರಿಗಳಿಗೆ ಗೊತ್ತಿತ್ತು’ ಎಂದು ಎರಡೆತ್ತಿನ ಮಠದ ಬಳಿಯ ನಿವಾಸಿ ಲಕ್ಷ್ಮಣ ಹಿರೇಮಠ ಹೇಳಿದರು.</p>.<p>‘ವೀರಾಪುರ ಓಣಿ ರಸ್ತೆಯಲ್ಲಿರುವ ಮೂರು ಮ್ಯಾನ್ಹೋಲ್ಗಳು ತುಂಬಿ ಹರಿಯುತ್ತವೆ. ಮಳೆಗಾಲದಲ್ಲಂತೂ ಸಮಸ್ಯೆ ತೀವ್ರವಾಗುತ್ತದೆ. ಹೀಗಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ಮುನ್ನ ಒಳಚರಂಡಿ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದೆವು. ಇಲಾಖೆಗಳ ನಡುವಿನ ಸಮನ್ವಯ ಇಲ್ಲ ಎನ್ನುವುದಕ್ಕೆ ರಸ್ತೆ ಅಗೆದಿರುವುದು ಸ್ಪಷ್ಟ ಉದಾಹರಣೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ವೀರಾಪುರ ಓಣಿ ರಸ್ತೆಯಲ್ಲಿನ ಒಳಚರಂಡಿ ಪೈಪ್ಲೈನ್ ಹಳೆಯದಾಗಿದ್ದು. ಹೀಗಾಗಿ ಸುತ್ತಲಿನ ನಿವಾಸಿಗಳ ಶೌಚಾಲಯದಲ್ಲಿ ಸಮಸ್ಯೆ ಎದುರಾಗುತ್ತಿತ್ತು. ದೂರುಗಳು ಬಂದ ಹಿನ್ನೆಲೆಯಲ್ಲಿ, ಕೆಆರ್ಐಡಿಎಲ್ ತುರ್ತಾಗಿ ಕಾಮಗಾರಿ ಕೈಗೊಂಡಿದೆ’ ಎಂದು ಹು–ಧಾ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ಆರ್. ತಿಳಿಸಿದರು.</p>.<p><strong>ಮನೆ ಮುಂದೆ ಮಣ್ಣಿನ ರಾಶಿ!</strong> </p><p>‘ವೀರಾಪುರ ಓಣಿಯಿಂದ ಯಲ್ಲಾಪುರ ಓಣಿಯ ಆಲ್ಫಾ ಹೋಟೆಲ್ವರೆಗೆ ಕಾಂಕ್ರೀಟ್ ರಸ್ತೆ ಅಗೆಯಲಾಗಿದ್ದು ಅದರ ಮಣ್ಣು ಮನೆಗಳು ಅಂಗಡಿಗಳ ಬಾಗಿಲವರೆಗೆ ಹರಡಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ಯಲ್ಲಾಪುರ ಓಣಿಯ ಸೈಯ್ಯದ್ ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದರು</p>.<div><blockquote>ಮಳೆಗಾಲ ಆರಂಭವಾಗುವ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಸಾರ್ವಜನಿಕರ ಸಹಕಾರ ಅಗತ್ಯ.</blockquote><span class="attribution">– ವಿಜಯಕುಮಾರ್, ಉಪ ಆಯುಕ್ತ (ಅಭಿವೃದ್ಧಿ) ಹು–ಧಾ ಮಹಾನಗರ ಪಾಲಿಕೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>