<p>ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಯುವ ಪ್ರತಿಭೆ ಜೆ.ಪೂರ್ವಿ ನಿರಂಜನ ಹಾಗೂ ತಂಡದವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಗ್ವಾಲಿಯರ್ ಕಿರಾಣಾ ಘರಾಣದಲ್ಲಿ ರಾಗ ಶುದ್ಧ ಕಲ್ಯಾಣ, ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತ ರಸಿಕರ ಮನ ತಣಿಸಿದರು. ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ್ ತಬಲಾ, ವಿಜಯಕುಮಾರ ಅರ್ಕಸಾಲಿ ಹಾರ್ಮೋನಿಯಂ, ಸುಮೇಧ ವಿಠ್ಠಲ ಹಾಗೂ ಮೌನೇಶ ಬಡಿಗೇರ ತಾಳದಲ್ಲಿ ಸಹಕರಿಸಿದರು.</p>.<p>ಹರಿದಾಸ ಚಿಂತಕ ವಿಷ್ಣುತೀರ್ಥ ಕಲ್ಲೂರಕರ, ಪಂಡಿತ ಬಾಲಚಂದ್ರ ನಾಕೋಡ, ಮಠದ ಧರ್ಮದರ್ಶಿ ಗೋವಿಂದಾಚಾರ್ಯ ಪಾಟೀಲ ಮಾತನಾಡಿದರು.</p>.<p>ಗಾಯಕ ಜೆ.ನಿರಂಜನ್, ರವಿ ಪಾಟೀಲ, ಶ್ರೀನಿವಾಸ ರಾವ್, ವೇದವ್ಯಾಸ ಬಂಡಿಹಾಳ್, ವಾದಿರಾಜ್ ಜೋಶಿ, ವಿದುಷಿ ಪ್ರತಿಮಾ ಜೋಶಿ, ಗೋಪಾಲ ಆಚಾರ್ಯ ಕಟ್ಟಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-24-2106375938</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಯುವ ಪ್ರತಿಭೆ ಜೆ.ಪೂರ್ವಿ ನಿರಂಜನ ಹಾಗೂ ತಂಡದವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಗ್ವಾಲಿಯರ್ ಕಿರಾಣಾ ಘರಾಣದಲ್ಲಿ ರಾಗ ಶುದ್ಧ ಕಲ್ಯಾಣ, ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತ ರಸಿಕರ ಮನ ತಣಿಸಿದರು. ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ್ ತಬಲಾ, ವಿಜಯಕುಮಾರ ಅರ್ಕಸಾಲಿ ಹಾರ್ಮೋನಿಯಂ, ಸುಮೇಧ ವಿಠ್ಠಲ ಹಾಗೂ ಮೌನೇಶ ಬಡಿಗೇರ ತಾಳದಲ್ಲಿ ಸಹಕರಿಸಿದರು.</p>.<p>ಹರಿದಾಸ ಚಿಂತಕ ವಿಷ್ಣುತೀರ್ಥ ಕಲ್ಲೂರಕರ, ಪಂಡಿತ ಬಾಲಚಂದ್ರ ನಾಕೋಡ, ಮಠದ ಧರ್ಮದರ್ಶಿ ಗೋವಿಂದಾಚಾರ್ಯ ಪಾಟೀಲ ಮಾತನಾಡಿದರು.</p>.<p>ಗಾಯಕ ಜೆ.ನಿರಂಜನ್, ರವಿ ಪಾಟೀಲ, ಶ್ರೀನಿವಾಸ ರಾವ್, ವೇದವ್ಯಾಸ ಬಂಡಿಹಾಳ್, ವಾದಿರಾಜ್ ಜೋಶಿ, ವಿದುಷಿ ಪ್ರತಿಮಾ ಜೋಶಿ, ಗೋಪಾಲ ಆಚಾರ್ಯ ಕಟ್ಟಿ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-24-2106375938</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>