<p><strong>ಹುಬ್ಬಳ್ಳಿ</strong>: ನಗರದಲ್ಲಿ ಶನಿವಾರ ‘ಈದ್– ಉಲ್ ಫಿತ್ರ್’ ಹಬ್ಬ ಕಳೆಗಟ್ಟಲಿದ್ದು, ಈಗಾಗಲೇ ಮುಸ್ಲಿಂ ಸಮುದಾಯದವರು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಸಮುದಾಯದ ಜನರು ಒಂದು ತಿಂಗಳು ಪವಿತ್ರ ‘ರಂಜಾನ್’ ಮಾಸವನ್ನು ಶ್ರದ್ಧೆಯಿಂದ ಆಚರಿಸಿದ್ದು, ಶುಕ್ರವಾರ ರಂಜಾನ್ ಮಾಸದ ‘ರೋಜಾ’ (ಉಪವಾಸ) ಅಂತ್ಯವಾಗಿದ್ದು, ಶನಿವಾರ ಸಂಭ್ರಮದಿಂದ ‘ಈದ್– ಉಲ್ ಫಿತ್ರ್’ ಹಬ್ಬ ಆಚರಿಸುವರು. </p>.<p>ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಈಗಾಗಲೇ ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರೊಂದಿಗೆ ಮೈದಾನದಲ್ಲಿನ ಈದ್ಗಾವನ್ನೂ ಸುಣ್ಣ–ಬಣ್ಣ ಬಳಿದು ಅಲಂಕರಿಸಲಾಗಿದೆ.</p>.<p>ಬೆಳಿಗ್ಗೆಯೇ ಸಮುದಾಯದ ಜನರು ಹೊಸಬಟ್ಟೆ ತೊಟ್ಟು ಈದ್ಗಾ ಮೈದಾನ ಹಾಗೂ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವರು. </p>.<p>ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10.35ಕ್ಕೆ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10.25ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.</p>.<p>ನಂತರ ತಮ್ಮ ಬಂಧು– ಮಿತ್ರರನ್ನು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು. </p>.<p>ಈದ್– ಉಲ್ ಫಿತ್ರ್ ಹಬ್ಬದ ಹಿನ್ನೆಯಲ್ಲಿ ನಗರದ ಎಂ.ಜಿ.ಮಾರ್ಕೆಟ್, ದುರ್ಗದ ಬೈಲ್ ಮತ್ತು ಶಾ ಬಜಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ತನಕ ಹಬ್ಬದ ಖರೀದಿಯು ತುಸು ಜೋರಾಗಿಯೇ ನಡೆಯಿತು. </p>.<p>ಸಮುದಾಯದ ಜನರು ಹೊಸಬಟ್ಟೆ, ಮಸಾಲೆ ಪದಾರ್ಥ, ಸಿಹಿ ತಿನಿಸು ತಯಾರಿಗೆ ಬೇಕಾದ ಅಗತ್ಯ ವಸ್ತು ಹಾಗೂ ಒಣಹಣ್ಣುಗಳ ಖರೀದಿ ಜೋರಾಗಿಯೇ ನಡೆಯಿತು. ಇಲ್ಲಿನ ಹೋಟೆಲ್ಗಳಲ್ಲಿ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳು ಹಾಗೂ ಸಸ್ಯಹಾರಿ ತಿನಿಸುಗಳ ಮಾರಾಟವೂ ನಡೆಯಿತು. </p>.<p><strong>ಶಿರ್ಕುರ್ಮಾಕ್ಕೆ ಆದ್ಯತೆ:</strong> ಈದ್–ಉಲ್ ಫಿತ್ರ್ ಹಬ್ಬದ ಸಿಹಿ ತಿನಿಸುಗಳಲ್ಲಿ ‘ಶಿರ್ಕುರ್ಮಾ’ ಸಿಹಿಖಾದ್ಯಕ್ಕೆ ಆದ್ಯತೆ. ಸಮುದಾಯದ ಜನರು ತಾವು ಸೇವಿಸುವುದರೊಂದಿಗೆ ತಮ್ಮ ಆಪ್ತರಿಗೆ ಹಾಗೂ ಮನೆಗೆ ಬರುವವರಿಗೂ ‘ಶಿರ್ಕುರ್ಮಾ’ವನ್ನು ಉಣಬಡಿಸಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. </p>.<p>ಶಿರ್ಕುರ್ಮಾ ತಯಾರಿಸಲು ಬೇಕಾಗುವ ಗೋಡಂಬಿ, ಬಾದಾಮ್, ಪಿಸ್ತಾ ಸೇರಿದಂತೆ ಒಣಹಣ್ಣುಗಳಿಗೆ ಇಲ್ಲಿನ ಮಾರ್ಕೆಟ್ನಲ್ಲಿ ಬೇಡಿಕೆಯೂ ಹೆಚ್ಚಿತ್ತು. ದುಬಾರಿಯಿದ್ದರೂ ಸಮುದಾಯದ ಜನರು ಅವುಗಳನ್ನು ಮುಗಿಬಿದ್ದು ಖರೀದಿಸಿದರು.</p>.<p>‘ಹಬ್ಬದ ಪ್ರಯುಕ್ತ ನಗರದಲ್ಲಿನ ಈದ್ಗಾ ಮೈದಾನಗಳು ಸೇರಿದಂತೆ 140 ಮಸೀದಿಗಳಲ್ಲಿ ಬೆಳಿಗ್ಗೆ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಜೊತೆಗೆ ದರ್ಗಾಗಳಲ್ಲಿಯೂ ಪ್ರಾರ್ಥನೆ ನಡೆಯುತ್ತದೆ’ ಎಂದು ಅಂಜುಮನ್ –ಎ– ಇಸ್ಲಾಂ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರ ಅಹ್ಮದ್ ಎ. ಹಳ್ಳೂರ ತಿಳಿಸಿದರು.</p>.<p>‘ದೇಶದಲ್ಲಿನ ಎಲ್ಲಾ ಧರ್ಮ, ಜಾತಿ, ಸಮುದಾಯದವರೂ ಒಗ್ಗಟ್ಟಿನಿಂದ ಖುಷಿಯಿಂದ ಇರಬೇಕು. ದೇಶವೂ ಅಭಿವೃದ್ಧಿ ಹೊಂದಬೇಕು ಎಂದು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಪ್ರಾರ್ಥಿಸುತ್ತೇವೆ. ಹಬ್ಬದ ವೇಳೆ ಎಲ್ಲಾ ಸಮುದಾಯದ ಬಡವರಿಗೆ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ದಾನ ಮಾಡುತ್ತೇವೆ’ ಎಂದು ತಿಳಿಸಿದರು.</p>.<p> <strong>‘ದುಡಿಮೆಯ ಅಲ್ಪ ಭಾಗ ದಾನ’: </strong> ‘ಇಸ್ಲಾಂ ಧರ್ಮದಲ್ಲೇ ದೊಡ್ಡ ಹಬ್ಬ ಇದು. ರಂಜಾನ್ ಮಾಸದ ವೇಳೆ ಎಲ್ಲಾ ಸಮುದಾಯದ ಜನರ ಒಳಿತಿಗಾಗಿ ಅಲ್ಲಾಹು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಧರ್ಮದಲ್ಲಿ ತಿಳಿಸಿದಂತೆ ನಮ್ಮ ದುಡಿಮೆಯ ಅಲ್ಪ ಭಾಗವನ್ನು ಬಡವರಿಗೆ ದಿನಸಿ ಬಟ್ಟೆ ಹಣವನ್ನು ದಾನ (ಜಕಾತ್) ಮಾಡುತ್ತೇವೆ‘ ಎಂದು ಹುಬ್ಬಳ್ಳಿಯ ಅಂಜುಮನ್–ಇ–ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ತಿಳಿಸಿದರು. </p> <p> <strong>ಕಾಮಗಾರಿ: ಜಾಗೃತಿ ವಹಿಸಲು ಸೂಚನೆ:</strong> ’ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಬರುವ ಸಮುದಾಯದ ಜನರು ವಯಸ್ಸಾದವರನ್ನು ಮತ್ತು ಮಕ್ಕಳನ್ನು ಪ್ರಾರ್ಥನಾ ಸ್ಥಳಕ್ಕೆ ಕರೆತರದಂತೆ ಸೂಚಿಸಲಾಗಿದೆ‘ ಎಂದು ಹುಬ್ಬಳ್ಳಿಯ ಅಂಜುಮನ್ –ಎ– ಇಸ್ಲಾಂ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರ ಅಹ್ಮದ್ ಎ. ಹಳ್ಳೂರ ತಿಳಿಸಿದರು.</p> <p> ‘ಈದ್ಗಾ ಮೈದಾನದ ಸುತ್ತಮುತ್ತಲಿನ ಕಾಮಗಾರಿ ಮಾರ್ಗದ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮೈದಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬರುವವರು ಜಾಗೃತಿ ವಹಿಸಬೇಕು ಎಂದೂ ಸೂಚಿಸಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ನಗರದಲ್ಲಿ ಶನಿವಾರ ‘ಈದ್– ಉಲ್ ಫಿತ್ರ್’ ಹಬ್ಬ ಕಳೆಗಟ್ಟಲಿದ್ದು, ಈಗಾಗಲೇ ಮುಸ್ಲಿಂ ಸಮುದಾಯದವರು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಸಮುದಾಯದ ಜನರು ಒಂದು ತಿಂಗಳು ಪವಿತ್ರ ‘ರಂಜಾನ್’ ಮಾಸವನ್ನು ಶ್ರದ್ಧೆಯಿಂದ ಆಚರಿಸಿದ್ದು, ಶುಕ್ರವಾರ ರಂಜಾನ್ ಮಾಸದ ‘ರೋಜಾ’ (ಉಪವಾಸ) ಅಂತ್ಯವಾಗಿದ್ದು, ಶನಿವಾರ ಸಂಭ್ರಮದಿಂದ ‘ಈದ್– ಉಲ್ ಫಿತ್ರ್’ ಹಬ್ಬ ಆಚರಿಸುವರು. </p>.<p>ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಈಗಾಗಲೇ ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರೊಂದಿಗೆ ಮೈದಾನದಲ್ಲಿನ ಈದ್ಗಾವನ್ನೂ ಸುಣ್ಣ–ಬಣ್ಣ ಬಳಿದು ಅಲಂಕರಿಸಲಾಗಿದೆ.</p>.<p>ಬೆಳಿಗ್ಗೆಯೇ ಸಮುದಾಯದ ಜನರು ಹೊಸಬಟ್ಟೆ ತೊಟ್ಟು ಈದ್ಗಾ ಮೈದಾನ ಹಾಗೂ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವರು. </p>.<p>ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10.35ಕ್ಕೆ ಹಾಗೂ ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10.25ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.</p>.<p>ನಂತರ ತಮ್ಮ ಬಂಧು– ಮಿತ್ರರನ್ನು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು. </p>.<p>ಈದ್– ಉಲ್ ಫಿತ್ರ್ ಹಬ್ಬದ ಹಿನ್ನೆಯಲ್ಲಿ ನಗರದ ಎಂ.ಜಿ.ಮಾರ್ಕೆಟ್, ದುರ್ಗದ ಬೈಲ್ ಮತ್ತು ಶಾ ಬಜಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ತನಕ ಹಬ್ಬದ ಖರೀದಿಯು ತುಸು ಜೋರಾಗಿಯೇ ನಡೆಯಿತು. </p>.<p>ಸಮುದಾಯದ ಜನರು ಹೊಸಬಟ್ಟೆ, ಮಸಾಲೆ ಪದಾರ್ಥ, ಸಿಹಿ ತಿನಿಸು ತಯಾರಿಗೆ ಬೇಕಾದ ಅಗತ್ಯ ವಸ್ತು ಹಾಗೂ ಒಣಹಣ್ಣುಗಳ ಖರೀದಿ ಜೋರಾಗಿಯೇ ನಡೆಯಿತು. ಇಲ್ಲಿನ ಹೋಟೆಲ್ಗಳಲ್ಲಿ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳು ಹಾಗೂ ಸಸ್ಯಹಾರಿ ತಿನಿಸುಗಳ ಮಾರಾಟವೂ ನಡೆಯಿತು. </p>.<p><strong>ಶಿರ್ಕುರ್ಮಾಕ್ಕೆ ಆದ್ಯತೆ:</strong> ಈದ್–ಉಲ್ ಫಿತ್ರ್ ಹಬ್ಬದ ಸಿಹಿ ತಿನಿಸುಗಳಲ್ಲಿ ‘ಶಿರ್ಕುರ್ಮಾ’ ಸಿಹಿಖಾದ್ಯಕ್ಕೆ ಆದ್ಯತೆ. ಸಮುದಾಯದ ಜನರು ತಾವು ಸೇವಿಸುವುದರೊಂದಿಗೆ ತಮ್ಮ ಆಪ್ತರಿಗೆ ಹಾಗೂ ಮನೆಗೆ ಬರುವವರಿಗೂ ‘ಶಿರ್ಕುರ್ಮಾ’ವನ್ನು ಉಣಬಡಿಸಿ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. </p>.<p>ಶಿರ್ಕುರ್ಮಾ ತಯಾರಿಸಲು ಬೇಕಾಗುವ ಗೋಡಂಬಿ, ಬಾದಾಮ್, ಪಿಸ್ತಾ ಸೇರಿದಂತೆ ಒಣಹಣ್ಣುಗಳಿಗೆ ಇಲ್ಲಿನ ಮಾರ್ಕೆಟ್ನಲ್ಲಿ ಬೇಡಿಕೆಯೂ ಹೆಚ್ಚಿತ್ತು. ದುಬಾರಿಯಿದ್ದರೂ ಸಮುದಾಯದ ಜನರು ಅವುಗಳನ್ನು ಮುಗಿಬಿದ್ದು ಖರೀದಿಸಿದರು.</p>.<p>‘ಹಬ್ಬದ ಪ್ರಯುಕ್ತ ನಗರದಲ್ಲಿನ ಈದ್ಗಾ ಮೈದಾನಗಳು ಸೇರಿದಂತೆ 140 ಮಸೀದಿಗಳಲ್ಲಿ ಬೆಳಿಗ್ಗೆ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಜೊತೆಗೆ ದರ್ಗಾಗಳಲ್ಲಿಯೂ ಪ್ರಾರ್ಥನೆ ನಡೆಯುತ್ತದೆ’ ಎಂದು ಅಂಜುಮನ್ –ಎ– ಇಸ್ಲಾಂ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರ ಅಹ್ಮದ್ ಎ. ಹಳ್ಳೂರ ತಿಳಿಸಿದರು.</p>.<p>‘ದೇಶದಲ್ಲಿನ ಎಲ್ಲಾ ಧರ್ಮ, ಜಾತಿ, ಸಮುದಾಯದವರೂ ಒಗ್ಗಟ್ಟಿನಿಂದ ಖುಷಿಯಿಂದ ಇರಬೇಕು. ದೇಶವೂ ಅಭಿವೃದ್ಧಿ ಹೊಂದಬೇಕು ಎಂದು ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಪ್ರಾರ್ಥಿಸುತ್ತೇವೆ. ಹಬ್ಬದ ವೇಳೆ ಎಲ್ಲಾ ಸಮುದಾಯದ ಬಡವರಿಗೆ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ದಾನ ಮಾಡುತ್ತೇವೆ’ ಎಂದು ತಿಳಿಸಿದರು.</p>.<p> <strong>‘ದುಡಿಮೆಯ ಅಲ್ಪ ಭಾಗ ದಾನ’: </strong> ‘ಇಸ್ಲಾಂ ಧರ್ಮದಲ್ಲೇ ದೊಡ್ಡ ಹಬ್ಬ ಇದು. ರಂಜಾನ್ ಮಾಸದ ವೇಳೆ ಎಲ್ಲಾ ಸಮುದಾಯದ ಜನರ ಒಳಿತಿಗಾಗಿ ಅಲ್ಲಾಹು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಧರ್ಮದಲ್ಲಿ ತಿಳಿಸಿದಂತೆ ನಮ್ಮ ದುಡಿಮೆಯ ಅಲ್ಪ ಭಾಗವನ್ನು ಬಡವರಿಗೆ ದಿನಸಿ ಬಟ್ಟೆ ಹಣವನ್ನು ದಾನ (ಜಕಾತ್) ಮಾಡುತ್ತೇವೆ‘ ಎಂದು ಹುಬ್ಬಳ್ಳಿಯ ಅಂಜುಮನ್–ಇ–ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ತಿಳಿಸಿದರು. </p> <p> <strong>ಕಾಮಗಾರಿ: ಜಾಗೃತಿ ವಹಿಸಲು ಸೂಚನೆ:</strong> ’ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಬರುವ ಸಮುದಾಯದ ಜನರು ವಯಸ್ಸಾದವರನ್ನು ಮತ್ತು ಮಕ್ಕಳನ್ನು ಪ್ರಾರ್ಥನಾ ಸ್ಥಳಕ್ಕೆ ಕರೆತರದಂತೆ ಸೂಚಿಸಲಾಗಿದೆ‘ ಎಂದು ಹುಬ್ಬಳ್ಳಿಯ ಅಂಜುಮನ್ –ಎ– ಇಸ್ಲಾಂ ಸಂಸ್ಥೆಯ ಗೌರವ ಕಾರ್ಯದರ್ಶಿ ಬಶೀರ ಅಹ್ಮದ್ ಎ. ಹಳ್ಳೂರ ತಿಳಿಸಿದರು.</p> <p> ‘ಈದ್ಗಾ ಮೈದಾನದ ಸುತ್ತಮುತ್ತಲಿನ ಕಾಮಗಾರಿ ಮಾರ್ಗದ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮೈದಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬರುವವರು ಜಾಗೃತಿ ವಹಿಸಬೇಕು ಎಂದೂ ಸೂಚಿಸಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>