<p>ಹುಬ್ಬಳ್ಳಿ: ‘ಹಿರಿಯ ನಾಗರಿಕರು ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ಸಮಚಿತ್ತ ಭಾವ ಇರಬೇಕು. ಸರ್ವರ ಹಿತ ಬಯಸಬೇಕು’ ಎಂದು ಶಿಕ್ಷಣ ತಜ್ಞ ಮಹೇಶ ಮಾಶ್ಯಾಳ ಹೇಳಿದರು.</p>.<p>ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ನಿಂದ ಏರ್ಪಡಿಸಿದ್ದ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸೆಕೆಂಡ್ ಇನ್ನಿಂಗ್ಸ್; ಬದುಕು ಈಗಷ್ಟೆ ಶುರುವಾಗಿದೆ’ ವಿಷಯದ ಕುರಿತು ಮಾತನಾಡಿದರು.</p>.<p>‘ವಾದ–ವಿವಾದ ಮಾಡದೆ, ಆರೋಗ್ಯಕರ ಸಂವಾದ ಮಾಡಬೇಕು. ಅಂತರಂಗದ ಅರಿವು ಜಾಗೃತಗೊಳಿಸಬೇಕು. ಹಿರಿಯ ನಾಗರಿಕರು ಇತರರಿಗೆ ಸಲಹೆ ನೀಡುವುದನ್ನು ಬಿಟ್ಟು, ಸಮ್ಮತಿ, ಸಹಕಾರ, ಸಂಸ್ಕೃತಿ ಮತ್ತು ಸಮೃದ್ಧಿ ಹೊಂದಿ ಸಂತೋಷವಾಗಿರಬೇಕು’ ಎಂದು ತಿಳಿಸಿದರು.</p>.<p>ಕ್ಲಬ್ ಉಪಾಧ್ಯಕ್ಷ ಎಸ್.ಐ. ಅಂಕಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ಹಳೇಮನಿ, ಸದಸ್ಯರಾದ ವಿ.ಬಿ. ಕಣವಿ, ಎಸ್.ಎಸ್. ಕರಡಿ, ಕೆ.ಎಸ್. ಕೌಜಲಗಿ, ನಿರ್ದೇಶಕ ಬಿ.ಎಸ್. ಮಾಳವಾಡ ಇದ್ದರು. ಏಪ್ರಿಲ್ ತಿಂಗಳಲ್ಲಿ ಜನಿಸಿದ ಸದಸ್ಯರ ಜನ್ಮದಿನ ಆಚರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-24-542399518</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಹಿರಿಯ ನಾಗರಿಕರು ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ಸಮಚಿತ್ತ ಭಾವ ಇರಬೇಕು. ಸರ್ವರ ಹಿತ ಬಯಸಬೇಕು’ ಎಂದು ಶಿಕ್ಷಣ ತಜ್ಞ ಮಹೇಶ ಮಾಶ್ಯಾಳ ಹೇಳಿದರು.</p>.<p>ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ನಿಂದ ಏರ್ಪಡಿಸಿದ್ದ ಸಭೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸೆಕೆಂಡ್ ಇನ್ನಿಂಗ್ಸ್; ಬದುಕು ಈಗಷ್ಟೆ ಶುರುವಾಗಿದೆ’ ವಿಷಯದ ಕುರಿತು ಮಾತನಾಡಿದರು.</p>.<p>‘ವಾದ–ವಿವಾದ ಮಾಡದೆ, ಆರೋಗ್ಯಕರ ಸಂವಾದ ಮಾಡಬೇಕು. ಅಂತರಂಗದ ಅರಿವು ಜಾಗೃತಗೊಳಿಸಬೇಕು. ಹಿರಿಯ ನಾಗರಿಕರು ಇತರರಿಗೆ ಸಲಹೆ ನೀಡುವುದನ್ನು ಬಿಟ್ಟು, ಸಮ್ಮತಿ, ಸಹಕಾರ, ಸಂಸ್ಕೃತಿ ಮತ್ತು ಸಮೃದ್ಧಿ ಹೊಂದಿ ಸಂತೋಷವಾಗಿರಬೇಕು’ ಎಂದು ತಿಳಿಸಿದರು.</p>.<p>ಕ್ಲಬ್ ಉಪಾಧ್ಯಕ್ಷ ಎಸ್.ಐ. ಅಂಕಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ. ಹಳೇಮನಿ, ಸದಸ್ಯರಾದ ವಿ.ಬಿ. ಕಣವಿ, ಎಸ್.ಎಸ್. ಕರಡಿ, ಕೆ.ಎಸ್. ಕೌಜಲಗಿ, ನಿರ್ದೇಶಕ ಬಿ.ಎಸ್. ಮಾಳವಾಡ ಇದ್ದರು. ಏಪ್ರಿಲ್ ತಿಂಗಳಲ್ಲಿ ಜನಿಸಿದ ಸದಸ್ಯರ ಜನ್ಮದಿನ ಆಚರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-24-542399518</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>