<p>ಹುಬ್ಬಳ್ಳಿ: ‘ನಗರದ ಗಣೇಶಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯಲ್ಲಿನ ಮಳಿಗೆಗಳ ಹಂಚಿಕೆಯಲ್ಲಿ ಮೀನು ಮಾರಾಟಗಾರರಿಗೆ ಅನ್ಯಾಯವಾಗಿದೆ’ ಎಂದು ಕರ್ನಾಟಕ ಹಿಂದುಳಿದ ಅಲ್ಪಸಂಖ್ಯಾತರ ವಿಕಾಸ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಯ್ಯದ್ ತನವೀರ ಹಯಾತಸಾಬ್ ಕಿತ್ತೂರ ಆರೋಪಿಸಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳಿಗೆ ನಿರ್ಮಾಣಕ್ಕೆ ಮುನ್ನ ಇದ್ದ ಮಾರಾಟಗಾರರನ್ನು ಬಿಟ್ಟು, ಯಾರ ಒತ್ತಡಕ್ಕೆ ಮಣಿದು ತಮಗೆ ಬೇಕಾದವರಿಗೆ ಮಳಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>‘ಈ ವಿಚಾರವಾಗಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರಿಂದ ಪ್ರತಿಕ್ರಿಯೆಯೂ ಬಂದಿದೆ. ಆದರೆ ಆಯುಕ್ತರು ಮಾತ್ರ ಸ್ಪಂದಿಸಿಲ್ಲ. ನಾವು ನ್ಯಾಯಾಲಯ ಮತ್ತು ಲೋಕಾಯುಕ್ತರ ಮೊರೆ ಹೋಗುತ್ತೇವೆ’ ಎಂದರು.</p>.<p>ಮೀನು ಮಾರಾಟಗಾರ ಇಂತಿಯಾಜ್ ಅಹ್ಮದ್ ಚೌಧರಿ ಅವರು, ‘ಮಳಿಗೆ ನಿರ್ಮಾಣಕ್ಕೂ ಮುನ್ನ 52 ಮೀನು ಮಾರಾಟಗಾರರಿದ್ದರು. ಈಗ ನಿರ್ಮಿಸಿದ್ದು 36 ಮಳಿಗೆ ಮಾತ್ರ. ಮೊದಲು ಇದ್ದವರಲ್ಲಿ ಹೆಚ್ಚೆಂದರೆ 10 ಮಾರಾಟಗಾರರಿಗೆ ಮಾತ್ರ ಮಳಿಗೆ ಸಿಕ್ಕಿರಬಹುದು. ಉಳಿದವರಿಗೆ ಅನ್ಯಾಯ ಆಗಿದೆ’ ಎಂದು ಆಕ್ಷೇಪಿಸಿದರು.</p>.<p>‘ಬಾಕಿ ಉಳಿದ ಬಾಡಿಗೆ ಮೊತ್ತವನ್ನು ಬಡ್ಡಿ ಸಹಿತ ಭರಿಸಬೇಕು. ಈಗ ಮಳಿಗೆ ಪಡೆಯಲು ₹50 ಸಾವಿರ ಮುಂಗಡ ಹಾಗೂ ಒಂದು ವರ್ಷದ ಬಾಡಿಗೆಯನ್ನು ಮುಂಚಿತವಾಗಿಯೇ ತುಂಬಬೇಕು ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಬಡವರಾದ ನಮಗೆ ಅಷ್ಟೊಂದು ಹಣ ತುಂಬಲು ಸಾಧ್ಯವಿಲ್ಲ. ಹಳೆಯ ಬಾಡಿಗೆ ಸಂಪೂರ್ಣ ಮನ್ನಾ ಮಾಡಬೇಕು. ಮುಂಗಡದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಹೊಸಬರಿಗೆ ₹25 ಸಾವಿರಕ್ಕೆ ಕೊಡುತ್ತಿದ್ದಾರೆ. ಅಷ್ಟು ಮೊತ್ತವನ್ನು ನಾವೇ ಭರಿಸುತ್ತಿದ್ದೆವು. ಆದರೆ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಮೀನು ಮಾರಾಟಗಾರ ಇರಿಯಾಸ್ ಹೈರಾತಿ ಅಸಮಾಧಾನ ಹೊರಹಾಕಿದರು. ಮೀನು ಮಾರಾಟಗಾರ ಜಾಕಿರಿಯಾ ಹೊಸೂರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-24-957161123</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ನಗರದ ಗಣೇಶಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯಲ್ಲಿನ ಮಳಿಗೆಗಳ ಹಂಚಿಕೆಯಲ್ಲಿ ಮೀನು ಮಾರಾಟಗಾರರಿಗೆ ಅನ್ಯಾಯವಾಗಿದೆ’ ಎಂದು ಕರ್ನಾಟಕ ಹಿಂದುಳಿದ ಅಲ್ಪಸಂಖ್ಯಾತರ ವಿಕಾಸ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಯ್ಯದ್ ತನವೀರ ಹಯಾತಸಾಬ್ ಕಿತ್ತೂರ ಆರೋಪಿಸಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳಿಗೆ ನಿರ್ಮಾಣಕ್ಕೆ ಮುನ್ನ ಇದ್ದ ಮಾರಾಟಗಾರರನ್ನು ಬಿಟ್ಟು, ಯಾರ ಒತ್ತಡಕ್ಕೆ ಮಣಿದು ತಮಗೆ ಬೇಕಾದವರಿಗೆ ಮಳಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.</p>.<p>‘ಈ ವಿಚಾರವಾಗಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರಿಂದ ಪ್ರತಿಕ್ರಿಯೆಯೂ ಬಂದಿದೆ. ಆದರೆ ಆಯುಕ್ತರು ಮಾತ್ರ ಸ್ಪಂದಿಸಿಲ್ಲ. ನಾವು ನ್ಯಾಯಾಲಯ ಮತ್ತು ಲೋಕಾಯುಕ್ತರ ಮೊರೆ ಹೋಗುತ್ತೇವೆ’ ಎಂದರು.</p>.<p>ಮೀನು ಮಾರಾಟಗಾರ ಇಂತಿಯಾಜ್ ಅಹ್ಮದ್ ಚೌಧರಿ ಅವರು, ‘ಮಳಿಗೆ ನಿರ್ಮಾಣಕ್ಕೂ ಮುನ್ನ 52 ಮೀನು ಮಾರಾಟಗಾರರಿದ್ದರು. ಈಗ ನಿರ್ಮಿಸಿದ್ದು 36 ಮಳಿಗೆ ಮಾತ್ರ. ಮೊದಲು ಇದ್ದವರಲ್ಲಿ ಹೆಚ್ಚೆಂದರೆ 10 ಮಾರಾಟಗಾರರಿಗೆ ಮಾತ್ರ ಮಳಿಗೆ ಸಿಕ್ಕಿರಬಹುದು. ಉಳಿದವರಿಗೆ ಅನ್ಯಾಯ ಆಗಿದೆ’ ಎಂದು ಆಕ್ಷೇಪಿಸಿದರು.</p>.<p>‘ಬಾಕಿ ಉಳಿದ ಬಾಡಿಗೆ ಮೊತ್ತವನ್ನು ಬಡ್ಡಿ ಸಹಿತ ಭರಿಸಬೇಕು. ಈಗ ಮಳಿಗೆ ಪಡೆಯಲು ₹50 ಸಾವಿರ ಮುಂಗಡ ಹಾಗೂ ಒಂದು ವರ್ಷದ ಬಾಡಿಗೆಯನ್ನು ಮುಂಚಿತವಾಗಿಯೇ ತುಂಬಬೇಕು ಎಂದು ಪಾಲಿಕೆಯವರು ಹೇಳುತ್ತಿದ್ದಾರೆ. ಬಡವರಾದ ನಮಗೆ ಅಷ್ಟೊಂದು ಹಣ ತುಂಬಲು ಸಾಧ್ಯವಿಲ್ಲ. ಹಳೆಯ ಬಾಡಿಗೆ ಸಂಪೂರ್ಣ ಮನ್ನಾ ಮಾಡಬೇಕು. ಮುಂಗಡದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಹೊಸಬರಿಗೆ ₹25 ಸಾವಿರಕ್ಕೆ ಕೊಡುತ್ತಿದ್ದಾರೆ. ಅಷ್ಟು ಮೊತ್ತವನ್ನು ನಾವೇ ಭರಿಸುತ್ತಿದ್ದೆವು. ಆದರೆ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಮೀನು ಮಾರಾಟಗಾರ ಇರಿಯಾಸ್ ಹೈರಾತಿ ಅಸಮಾಧಾನ ಹೊರಹಾಕಿದರು. ಮೀನು ಮಾರಾಟಗಾರ ಜಾಕಿರಿಯಾ ಹೊಸೂರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-24-957161123</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>