<p><strong>ಹುಬ್ಬಳ್ಳಿ:</strong> ಒಂದಿಲ್ಲೊಂದು ಕಾರಣಕ್ಕೆ ಪ್ರತಿವರ್ಷ ಜಿಲ್ಲೆಯಲ್ಲಿ ಮಾವು ಬೆಳೆ ಹಾನಿಯಾಗಿ, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಕೂಡ ರೋಗಬಾಧೆಯೊಂದಿಗೆ ಬೇಸಿಗೆಯಲ್ಲಿ ಗಾಳಿ ಹಾಗೂ ಆಲಿಕಲ್ಲು ಸಹಿತ ಸುರಿದ ಭಾರಿ ಪ್ರಮಾಣದ ಮಳೆಯಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.</p>.<p>ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಸಮೃದ್ಧವಾಗಿ ಹೂವು ಮೂಡಿದ್ದರಿಂದ ರೈತರು ಸಂತಸಗೊಂಡಿದ್ದರು. ಈ ವರ್ಷವಾದರೂ ಉತ್ತಮ ಆದಾಯ ಬರುವುದೆಂದು ನಿರೀಕ್ಷಿಸಿದ್ದರು. ಕೆಲ ತಿಂಗಳಲ್ಲೇ ಬೆಳೆಗೆ ಕಾಣಿಸಿಕೊಂಡ ರೋಗಗಳು ಅಪಾರ ಪ್ರಮಾಣದಲ್ಲಿ ಹೂವು ಉದುರಲು ಕಾರಣವಾದವು. ಇತ್ತೀಚೆಗೆ ಮಳೆಯ ಹೊಡೆತಕ್ಕೆ ಮಿಡಿಗಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಕಚ್ಚಿದವು. ಮತ್ತೆ ವಿಪರೀತ ಮಳೆಯಾದರೆ ಅಳಿದುಳಿದ ಬೆಳೆಯೂ ಹಾನಿಯಾಗಿ, ಸಂಪೂರ್ಣ ನಷ್ಟ ಉಂಟಾಗುವ ಆತಂಕ ರೈತರನ್ನು ಕಾಡುತ್ತಿದೆ.</p>.<p>‘ನಮ್ಮ ತೋಟದಲ್ಲಿ 300 ಮಾವಿನ ಮರಗಳಿವೆ. ಈಚೆಗೆ ಗಾಳಿ, ಆಲಿಕಲ್ಲು ಸಹಿತ ಮಳೆಗೆ ಶೇ 50ರಷ್ಟು ಬೆಳೆ ಹಾನಿಯಾಗಿದೆ. ಗುತ್ತಿಗೆ ಆಧಾರದಲ್ಲಿ ಮಾವು ಮಾರಾಟ ಮಾಡಿದ್ದರಿಂದ ಕಳೆದ ವರ್ಷ ₹5 ಲಕ್ಷವಾದರೂ ಸಿಕ್ಕಿತ್ತು. ಈ ವರ್ಷ ₹3.30 ಲಕ್ಷಕ್ಕೆ ಗುತ್ತಿಗೆ ನೀಡಿದ್ದೇನೆ. ವಿಮೆ ಮಾಡಿಸಿದ್ದರಿಂದ ₹1 ಲಕ್ಷದವರೆಗೆ ಪರಿಹಾರ ಸಿಗಬಹುದು. ಆದರೆ, ಎಲ್ಲ ಪ್ರಕ್ರಿಯೆ ಮುಗಿದು ಹಣ ಕೈಸೇರುವುದು ನಿಧಾನವಾಗುತ್ತದೆ’ ಎಂದು ಗಾಮನಗಟ್ಟಿಯ ರೈತ ಬಸವರಾಜ ಮನಗುಂಡಿ ಬೇಸರ ವ್ಯಕ್ತಪಡಿಸಿದರು.</p>.<p>‘ಮಾವಿನ ಸುದ್ದಿ ಕೇಳಿದರೇ ಮೈ ನಡುಗುತ್ತದೆ. ಈ ವರ್ಷ ವಿಪರೀತ ನಷ್ಟವಾಗಿದೆ. ತೋಟದಲ್ಲಿರುವ 800 ಮಾವಿನ ಮರಗಳಲ್ಲಿ ಕಳೆದ ವರ್ಷ 5 ಲಾರಿಗಳಷ್ಟು ಇಳುವರಿ ಸಿಕ್ಕಿತ್ತು. ಈ ವರ್ಷ 8 ಲಾರಿಗಳಷ್ಟು ಇಳುವರಿ ಸಿಗುವುದೆಂಬ ಆಸೆಯಲ್ಲಿದ್ದೆ. ಆದರೆ, ಬಹುಪಾಲು ಬೆಳೆ ಹಾನಿಯಾಗಿದೆ. ಮುಂದೇನು ಮಾಡುವುದೆಂದು ರೈತರೆಲ್ಲ ಕೂಡಿ ಚರ್ಚೆ ನಡೆಸುತ್ತೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತಿರುವ ನಾವು, ಕೃಷಿಭೂಮಿಯನ್ನು ಗೇಣಿಗೆ ನೀಡಲು ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಮಾವು ಬೆಳೆಗಾರ ಈಶ್ವರ ಮಾಳಣ್ಣವರ.</p>.<p><strong>'ವೈಜ್ಞಾನಿಕ ಪರಿಹಾರ ಯೋಜನೆ ರೂಪಿಸಿ'</strong></p><p>'ಧಾರವಾಡ ಭಾಗದಲ್ಲಿ ಬೆಳೆಯುವ ಅಪೋಸ್ ಮಾವಿನಹಣ್ಣು ಸುಪ್ರಸಿದ್ದವಾಗಿದೆ. ಆದರೆ, ಅದನ್ನು ಉಳಿಸಿಕೊಳ್ಳಲು ಬೆಳೆಗಾರರು ಹೆಣಗಾಡುವಂತಾಗಿದೆ. ಸರ್ಕಾರವು, ವೈಜ್ಞಾನಿಕ ಬೆಳೆ ಪರಿಹಾರ ಯೋಜನೆ ರೂಪಿಸಿ, ಸೂಕ್ತ ಪರಿಹಾರ ನೀಡಬೇಕು' ಎಂದು ಮಾವು ಬೆಳೆಗಾರರ ಬಳಗದ ಮುಖಂಡ ರಾಜೇಂದ್ರ ಪೊದ್ದಾರ ಆಗ್ರಹಿಸಿದರು.</p><p>'ಅಳಿದುಳಿದ ಬೆಳೆ ಸಂರಕ್ಷಣೆಯ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಶೇ 10-15ರಷ್ಟು ಮಾತ್ರ ಇಳುವರಿ ಸಿಗಲಿದೆ. ವಿಮಾ ಪರಿಹಾರವು ಸಂಪೂರ್ಣ ನಷ್ಟ ಭರಿಸುವುದಿಲ್ಲ. ಮೇ ಅಥವಾ ಜೂನ್ ತಿಂಗಳೊಳಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದಲ್ಲಿ, ರೈತರು ಮಾವು ಬೆಳೆಯುವುದರಿಂದ ವಿಮುಖರಾಗುತ್ತಾರೆ' ಎಂದರು.</p><p>'ಮಾವು ಬೆಳೆಗೆ ಕಾಣಿಸಿಕೊಳ್ಳುವ ರೋಗಗಳ ಕುರಿತು ತೋಟಗಾರಿಕೆ ಹಾಗೂ ಕೃಷಿ ವಿಶ್ವವಿದ್ಯಾಲಗಳು ವೈಜ್ಞಾನಿಕ ಸಂಶೋಧನೆ ಕೈಗೊಳ್ಳಬೇಕು. ಮಾವು ಅಭಿವೃದ್ಧಿ ಮಂಡಳಿಗೆ ಅಗತ್ಯ ಅನುದಾನ ಒದಗಿಸಬೇಕು. ಧಾರವಾಡದಲ್ಲಿ ಮಾವು ಬೆಳೆಗಾಗಿ ವಿಶೇಷ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ರೋಗ ಕಂಡುಬಂದಾಗ, ಸರ್ಕಾರದಿಂದಲೇ ಔಷಧ ಸಿಂಪಡಿಸಬೇಕು' ಎಂದು ಒತ್ತಾಯಿಸಿದರು.</p>.<div><blockquote>ಮಾವು ಬೆಳೆ ಹಾನಿ ಕುರಿತು ಕಲಘಟಗಿ, ಕುಂದಗೋಳ ಭಾಗದಲ್ಲಿ ಸಮೀಕ್ಷೆ ಆಗಿದೆ. ಎಲ್ಲ ತೋಟಗಾರಿಕಾ ಬೆಳೆಗಳ ಇಳುವರಿ ಕಡಿಮೆಯಾಗಿದ್ದು, ವಿಶೇಷ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ </blockquote><span class="attribution">ಕಾಶಿನಾಥ ಭದ್ರಣ್ಣವರ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಒಂದಿಲ್ಲೊಂದು ಕಾರಣಕ್ಕೆ ಪ್ರತಿವರ್ಷ ಜಿಲ್ಲೆಯಲ್ಲಿ ಮಾವು ಬೆಳೆ ಹಾನಿಯಾಗಿ, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಕೂಡ ರೋಗಬಾಧೆಯೊಂದಿಗೆ ಬೇಸಿಗೆಯಲ್ಲಿ ಗಾಳಿ ಹಾಗೂ ಆಲಿಕಲ್ಲು ಸಹಿತ ಸುರಿದ ಭಾರಿ ಪ್ರಮಾಣದ ಮಳೆಯಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.</p>.<p>ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಸಮೃದ್ಧವಾಗಿ ಹೂವು ಮೂಡಿದ್ದರಿಂದ ರೈತರು ಸಂತಸಗೊಂಡಿದ್ದರು. ಈ ವರ್ಷವಾದರೂ ಉತ್ತಮ ಆದಾಯ ಬರುವುದೆಂದು ನಿರೀಕ್ಷಿಸಿದ್ದರು. ಕೆಲ ತಿಂಗಳಲ್ಲೇ ಬೆಳೆಗೆ ಕಾಣಿಸಿಕೊಂಡ ರೋಗಗಳು ಅಪಾರ ಪ್ರಮಾಣದಲ್ಲಿ ಹೂವು ಉದುರಲು ಕಾರಣವಾದವು. ಇತ್ತೀಚೆಗೆ ಮಳೆಯ ಹೊಡೆತಕ್ಕೆ ಮಿಡಿಗಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಕಚ್ಚಿದವು. ಮತ್ತೆ ವಿಪರೀತ ಮಳೆಯಾದರೆ ಅಳಿದುಳಿದ ಬೆಳೆಯೂ ಹಾನಿಯಾಗಿ, ಸಂಪೂರ್ಣ ನಷ್ಟ ಉಂಟಾಗುವ ಆತಂಕ ರೈತರನ್ನು ಕಾಡುತ್ತಿದೆ.</p>.<p>‘ನಮ್ಮ ತೋಟದಲ್ಲಿ 300 ಮಾವಿನ ಮರಗಳಿವೆ. ಈಚೆಗೆ ಗಾಳಿ, ಆಲಿಕಲ್ಲು ಸಹಿತ ಮಳೆಗೆ ಶೇ 50ರಷ್ಟು ಬೆಳೆ ಹಾನಿಯಾಗಿದೆ. ಗುತ್ತಿಗೆ ಆಧಾರದಲ್ಲಿ ಮಾವು ಮಾರಾಟ ಮಾಡಿದ್ದರಿಂದ ಕಳೆದ ವರ್ಷ ₹5 ಲಕ್ಷವಾದರೂ ಸಿಕ್ಕಿತ್ತು. ಈ ವರ್ಷ ₹3.30 ಲಕ್ಷಕ್ಕೆ ಗುತ್ತಿಗೆ ನೀಡಿದ್ದೇನೆ. ವಿಮೆ ಮಾಡಿಸಿದ್ದರಿಂದ ₹1 ಲಕ್ಷದವರೆಗೆ ಪರಿಹಾರ ಸಿಗಬಹುದು. ಆದರೆ, ಎಲ್ಲ ಪ್ರಕ್ರಿಯೆ ಮುಗಿದು ಹಣ ಕೈಸೇರುವುದು ನಿಧಾನವಾಗುತ್ತದೆ’ ಎಂದು ಗಾಮನಗಟ್ಟಿಯ ರೈತ ಬಸವರಾಜ ಮನಗುಂಡಿ ಬೇಸರ ವ್ಯಕ್ತಪಡಿಸಿದರು.</p>.<p>‘ಮಾವಿನ ಸುದ್ದಿ ಕೇಳಿದರೇ ಮೈ ನಡುಗುತ್ತದೆ. ಈ ವರ್ಷ ವಿಪರೀತ ನಷ್ಟವಾಗಿದೆ. ತೋಟದಲ್ಲಿರುವ 800 ಮಾವಿನ ಮರಗಳಲ್ಲಿ ಕಳೆದ ವರ್ಷ 5 ಲಾರಿಗಳಷ್ಟು ಇಳುವರಿ ಸಿಕ್ಕಿತ್ತು. ಈ ವರ್ಷ 8 ಲಾರಿಗಳಷ್ಟು ಇಳುವರಿ ಸಿಗುವುದೆಂಬ ಆಸೆಯಲ್ಲಿದ್ದೆ. ಆದರೆ, ಬಹುಪಾಲು ಬೆಳೆ ಹಾನಿಯಾಗಿದೆ. ಮುಂದೇನು ಮಾಡುವುದೆಂದು ರೈತರೆಲ್ಲ ಕೂಡಿ ಚರ್ಚೆ ನಡೆಸುತ್ತೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತಿರುವ ನಾವು, ಕೃಷಿಭೂಮಿಯನ್ನು ಗೇಣಿಗೆ ನೀಡಲು ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಮಾವು ಬೆಳೆಗಾರ ಈಶ್ವರ ಮಾಳಣ್ಣವರ.</p>.<p><strong>'ವೈಜ್ಞಾನಿಕ ಪರಿಹಾರ ಯೋಜನೆ ರೂಪಿಸಿ'</strong></p><p>'ಧಾರವಾಡ ಭಾಗದಲ್ಲಿ ಬೆಳೆಯುವ ಅಪೋಸ್ ಮಾವಿನಹಣ್ಣು ಸುಪ್ರಸಿದ್ದವಾಗಿದೆ. ಆದರೆ, ಅದನ್ನು ಉಳಿಸಿಕೊಳ್ಳಲು ಬೆಳೆಗಾರರು ಹೆಣಗಾಡುವಂತಾಗಿದೆ. ಸರ್ಕಾರವು, ವೈಜ್ಞಾನಿಕ ಬೆಳೆ ಪರಿಹಾರ ಯೋಜನೆ ರೂಪಿಸಿ, ಸೂಕ್ತ ಪರಿಹಾರ ನೀಡಬೇಕು' ಎಂದು ಮಾವು ಬೆಳೆಗಾರರ ಬಳಗದ ಮುಖಂಡ ರಾಜೇಂದ್ರ ಪೊದ್ದಾರ ಆಗ್ರಹಿಸಿದರು.</p><p>'ಅಳಿದುಳಿದ ಬೆಳೆ ಸಂರಕ್ಷಣೆಯ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಶೇ 10-15ರಷ್ಟು ಮಾತ್ರ ಇಳುವರಿ ಸಿಗಲಿದೆ. ವಿಮಾ ಪರಿಹಾರವು ಸಂಪೂರ್ಣ ನಷ್ಟ ಭರಿಸುವುದಿಲ್ಲ. ಮೇ ಅಥವಾ ಜೂನ್ ತಿಂಗಳೊಳಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದಲ್ಲಿ, ರೈತರು ಮಾವು ಬೆಳೆಯುವುದರಿಂದ ವಿಮುಖರಾಗುತ್ತಾರೆ' ಎಂದರು.</p><p>'ಮಾವು ಬೆಳೆಗೆ ಕಾಣಿಸಿಕೊಳ್ಳುವ ರೋಗಗಳ ಕುರಿತು ತೋಟಗಾರಿಕೆ ಹಾಗೂ ಕೃಷಿ ವಿಶ್ವವಿದ್ಯಾಲಗಳು ವೈಜ್ಞಾನಿಕ ಸಂಶೋಧನೆ ಕೈಗೊಳ್ಳಬೇಕು. ಮಾವು ಅಭಿವೃದ್ಧಿ ಮಂಡಳಿಗೆ ಅಗತ್ಯ ಅನುದಾನ ಒದಗಿಸಬೇಕು. ಧಾರವಾಡದಲ್ಲಿ ಮಾವು ಬೆಳೆಗಾಗಿ ವಿಶೇಷ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ರೋಗ ಕಂಡುಬಂದಾಗ, ಸರ್ಕಾರದಿಂದಲೇ ಔಷಧ ಸಿಂಪಡಿಸಬೇಕು' ಎಂದು ಒತ್ತಾಯಿಸಿದರು.</p>.<div><blockquote>ಮಾವು ಬೆಳೆ ಹಾನಿ ಕುರಿತು ಕಲಘಟಗಿ, ಕುಂದಗೋಳ ಭಾಗದಲ್ಲಿ ಸಮೀಕ್ಷೆ ಆಗಿದೆ. ಎಲ್ಲ ತೋಟಗಾರಿಕಾ ಬೆಳೆಗಳ ಇಳುವರಿ ಕಡಿಮೆಯಾಗಿದ್ದು, ವಿಶೇಷ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ </blockquote><span class="attribution">ಕಾಶಿನಾಥ ಭದ್ರಣ್ಣವರ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>