<p>ಹುಬ್ಬಳ್ಳಿ: ಇಲ್ಲಿಯ ನವನಗರದ ಪೊಲೀಸ್ ಕಮಿಷನರ್ ಕಚೇರಿ ಎದುರಿನ ಹುಬ್ಬಳ್ಳಿ–ಧಾರವಾಡ ರಾಷ್ಟ್ರೀಯ ಹೆದ್ದಾರಿ (ಮಿಶ್ರಪಥ) ಮಧ್ಯ ಹಾಗೂ ಧಾರವಾಡಕ್ಕೆ ತೆರಳುವ ಬಿಆರ್ಟಿಎಸ್ ಕಾರಿಡಾರ್ ಮಧ್ಯ ಬ್ಯಾರಿಕೇಡ್ ಹಾಕಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ.</p>.<p>ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತವೆ ಎನ್ನುವ ಕಾರಣಕ್ಕೆ, ಮೂರು ದಿನದ ಹಿಂದೆ ಬ್ಯಾರಿಕೇಡ್ ಹಾಕಲಾಗಿದೆ. ಇದು ಚಿಗರಿ ಬಸ್ ಚಾಲಕರ ಹಾಗೂ ಅವಳಿನಗರದ ಮಧ್ಯೆ ಸಂಚರಿಸುವ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳುವ ಕಮಿಷನರ್ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ (ಮಿಶ್ರಪಥ)ಯಲ್ಲಿ ಎರಡು ಬ್ಯಾರಿಕೇಡ್, ಚಿಗರಿ ಬಸ್ ಧಾರವಾಡ ಕಡೆ ಸಂಚರಿಸುವ ಕಾರಿಡಾರ್ನಲ್ಲಿ ಮೂರು ಬ್ಯಾರಿಕೇಡ್ ಹಾಕಲಾಗಿದೆ. ಪರಿಣಾಮ ಮಿಶ್ರಪಥದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಬಸ್ಸ್ಟಾಪ್ನಿಂದ ಕಮಿಷನರ್ ಕಚೇರಿವರೆಗೂ ಸಂಚಾರ ದಟ್ಟಣೆ ಏರ್ಪಡುತ್ತಿದೆ. ಇತ್ತ, ಬಿಆರ್ಟಿಎಸ್ ಕಾರಿಡಾರ್ನಲ್ಲಿಯೂ ಚಿಗರಿ ಬಸ್ ಸರಾಗವಾಗಿ ಸಂಚರಿಸಲು ತೊಡಕಾಗುತ್ತಿದೆ.</p>.<p>‘ಅತಿವೇಗ, ನಿರ್ಲಕ್ಷ್ಯದ ಚಾಲನೆ, ಏಕಮುಖ ಹಾಗೂ ನಿಷೇಧಿತ ಮಾರ್ಗದಲ್ಲಿ ವಾಹನಗಳು ಸಂಚರಿಸಿದಾಗ ಸಾಮಾನ್ಯವಾಗಿ ಅಪಘಾತಗಳು ನಡೆಯುತ್ತವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೇ ಹೊರತು, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಚಿಗರಿ ಬಸ್ ಸಂಚರಿಸುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕುವುದು ಸರಿಯಲ್ಲ. ಪೊಲೀಸರಿಂದಲೇ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ’ ಎಂದು ವಾಹನ ಸವಾರ ದೀಪಕ್ ಹಿರೇಮನಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಬಿಆರ್ಟಿಎಸ್ ಕಾರಿಡಾರ್ನಲ್ಲಿ ಚಿಗರಿ ಬಸ್ ವೇಗವಾಗಿ ಸಂಚರಿಸುತ್ತದೆ. ಜಿಗ್ ಜಾಗ್ ಮಾದರಿಯಲ್ಲಿ ಮೂರು ಬ್ಯಾರಿಕೇಡ್ ಹಾಕಿರುವುದರಿಂದ, ಒಮ್ಮೆಲೆ ವೇಗ ನಿಯಂತ್ರಿಸಲು ಕಷ್ಟವಾಗುತ್ತದೆ. ಇದು ಅಪಘಾತಕ್ಕೂ ಕಾರಣವಾಗುವ ಸಾಧ್ಯತೆಯಿದೆ. ಅಲ್ಲದೆ, ಬಿಆರ್ಟಿಎಸ್ ಮಾರ್ಗ ಇರುವುದೇ ಚಿಗರಿ ಬಸ್ ಮಾತ್ರ ಸಂಚರಿಸಲು. ಅಲ್ಲಿ ಬ್ಯಾರಿಕೇಡ್ ಹಾಕುವ ಅಗತ್ಯವಾದರೂ ಏನಿದೆ? ಪೊಲೀಸ್ ಕಮಿಷನರ್ ಕಚೇರಿ ಎದುರಿಗೇ, ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ’ ಎಂದು ಚಿಗರಿ ಬಸ್ ಚಾಲಕರೊಬ್ಬರು ದೂರಿದರು.</p>.<p>‘ಪೊಲೀಸ್ ಕಮಿಷನರ್ ಕಚೇರಿಗೆ ತೆರಳುವಾಗ ಹಾಗೂ ಅಲ್ಲಿಂದ ಬರುವಾಗ ವಾಹನ ಸವಾರರಿಗೆ ಸಮಸ್ಯೆಯಾಗಬಾರದು ಎಂದು, ಪ್ರವೇಶ ದ್ವಾರದ ಬಳಿ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪಘಾತಗಳು ನಡೆಯದಂತೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಅವರ ಕರ್ತವ್ಯ. ಎರಡು ಪಾಳಿಯಲ್ಲಿ ನಿಯೋಜನೆಯಾಗಿರುವ ಅವರು, ಕಮಿಷನರ್, ಡಿಸಿಪಿ, ಎಸಿಪಿಗಳು ಬರುವಾಗ ಮತ್ತು ಹೋಗುವಾಗ ಮಾತ್ರ ಜಾಗೃತರಾಗಿರುತ್ತಾರೆ. ಉಳಿದ ಸಮಯ ಮೊಬೈಲ್ನಲ್ಲಿ ಮಗ್ನರಾಗಿರುತ್ತಾರೆ’ ಎಂದು ಪೊಲೀಸರೇ ಹೇಳುತ್ತಾರೆ.</p>.<div><blockquote> ನವನಗರದ ಬಳಿ ಸಾಕಷ್ಟು ಅಪಘಾತಗಳು ನಡೆಯುತ್ತಿರುವುದರಿಂದ ಬಿಆರ್ಟಿಎಸ್ ಮತ್ತು ಮಿಶ್ರಪಥದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ವಾಹನ ಸವಾರರ ಸಹಕಾರ ಅಗತ್ಯ </blockquote><span class="attribution"> –ರವೀಶ್ ಸಿ.ಆರ್. ಡಿಸಿಪಿ ಸಂಚಾರ ವಿಭಾಗ</span></div>. <p><strong>ಬ್ಯಾರಿಕೇಡ್ ತೆರವಿಗೆ ಆಗ್ರಹ</strong> </p><p>‘ಹುಬ್ಬಳ್ಳಿ–ಧಾರವಾಡ ಮಧ್ಯದ ಬಿಆರ್ಟಿಎಸ್ನ 22 ಕಿ.ಮೀ. ಕಾರಿಡಾರ್ನಲ್ಲಿ ಎಂಟು–ಹತ್ತು ವರ್ಷಗಳಿಂದ ಸಾಕಷ್ಟು ಅಪಘಾತಗಳು ನಡೆದು ಅನೇಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಆದರೂ ಈವರೆಗೆ ಮುಂಜಾಗ್ರತಾ ಕ್ರಮವೆಂದು ಎಲ್ಲಿಯೂ ಬ್ಯಾರಿಕೇಡ್ ಹಾಕಿಲ್ಲ. ಆದರೆ ಪೊಲೀಸ್ ಕಮಿಷನರ್ ಕಚೇರಿ ಎದುರು ಅಪಘಾತ ನಡೆಯಿತು ಎಂದು ಬ್ಯಾರಿಕೇಡ್ ಹಾಕಿರುವುದು ಎಷ್ಟು ಸರಿ? ಇದು ಕಾನೂನು ಬಾಹಿರ ಕ್ರಮವಾಗಿದ್ದು ತಕ್ಷಣ ಅವುಗಳನ್ನು ತೆರವು ಮಾಡಬೇಕು’ ಎಂದು ನವನಗರ ನಿವಾಸಿ ಇಸ್ಮಾಯಿಲ್ ಬೇಪಾರಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಇಲ್ಲಿಯ ನವನಗರದ ಪೊಲೀಸ್ ಕಮಿಷನರ್ ಕಚೇರಿ ಎದುರಿನ ಹುಬ್ಬಳ್ಳಿ–ಧಾರವಾಡ ರಾಷ್ಟ್ರೀಯ ಹೆದ್ದಾರಿ (ಮಿಶ್ರಪಥ) ಮಧ್ಯ ಹಾಗೂ ಧಾರವಾಡಕ್ಕೆ ತೆರಳುವ ಬಿಆರ್ಟಿಎಸ್ ಕಾರಿಡಾರ್ ಮಧ್ಯ ಬ್ಯಾರಿಕೇಡ್ ಹಾಕಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ.</p>.<p>ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತವೆ ಎನ್ನುವ ಕಾರಣಕ್ಕೆ, ಮೂರು ದಿನದ ಹಿಂದೆ ಬ್ಯಾರಿಕೇಡ್ ಹಾಕಲಾಗಿದೆ. ಇದು ಚಿಗರಿ ಬಸ್ ಚಾಲಕರ ಹಾಗೂ ಅವಳಿನಗರದ ಮಧ್ಯೆ ಸಂಚರಿಸುವ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳುವ ಕಮಿಷನರ್ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ (ಮಿಶ್ರಪಥ)ಯಲ್ಲಿ ಎರಡು ಬ್ಯಾರಿಕೇಡ್, ಚಿಗರಿ ಬಸ್ ಧಾರವಾಡ ಕಡೆ ಸಂಚರಿಸುವ ಕಾರಿಡಾರ್ನಲ್ಲಿ ಮೂರು ಬ್ಯಾರಿಕೇಡ್ ಹಾಕಲಾಗಿದೆ. ಪರಿಣಾಮ ಮಿಶ್ರಪಥದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಬಸ್ಸ್ಟಾಪ್ನಿಂದ ಕಮಿಷನರ್ ಕಚೇರಿವರೆಗೂ ಸಂಚಾರ ದಟ್ಟಣೆ ಏರ್ಪಡುತ್ತಿದೆ. ಇತ್ತ, ಬಿಆರ್ಟಿಎಸ್ ಕಾರಿಡಾರ್ನಲ್ಲಿಯೂ ಚಿಗರಿ ಬಸ್ ಸರಾಗವಾಗಿ ಸಂಚರಿಸಲು ತೊಡಕಾಗುತ್ತಿದೆ.</p>.<p>‘ಅತಿವೇಗ, ನಿರ್ಲಕ್ಷ್ಯದ ಚಾಲನೆ, ಏಕಮುಖ ಹಾಗೂ ನಿಷೇಧಿತ ಮಾರ್ಗದಲ್ಲಿ ವಾಹನಗಳು ಸಂಚರಿಸಿದಾಗ ಸಾಮಾನ್ಯವಾಗಿ ಅಪಘಾತಗಳು ನಡೆಯುತ್ತವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೇ ಹೊರತು, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಚಿಗರಿ ಬಸ್ ಸಂಚರಿಸುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕುವುದು ಸರಿಯಲ್ಲ. ಪೊಲೀಸರಿಂದಲೇ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ’ ಎಂದು ವಾಹನ ಸವಾರ ದೀಪಕ್ ಹಿರೇಮನಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಬಿಆರ್ಟಿಎಸ್ ಕಾರಿಡಾರ್ನಲ್ಲಿ ಚಿಗರಿ ಬಸ್ ವೇಗವಾಗಿ ಸಂಚರಿಸುತ್ತದೆ. ಜಿಗ್ ಜಾಗ್ ಮಾದರಿಯಲ್ಲಿ ಮೂರು ಬ್ಯಾರಿಕೇಡ್ ಹಾಕಿರುವುದರಿಂದ, ಒಮ್ಮೆಲೆ ವೇಗ ನಿಯಂತ್ರಿಸಲು ಕಷ್ಟವಾಗುತ್ತದೆ. ಇದು ಅಪಘಾತಕ್ಕೂ ಕಾರಣವಾಗುವ ಸಾಧ್ಯತೆಯಿದೆ. ಅಲ್ಲದೆ, ಬಿಆರ್ಟಿಎಸ್ ಮಾರ್ಗ ಇರುವುದೇ ಚಿಗರಿ ಬಸ್ ಮಾತ್ರ ಸಂಚರಿಸಲು. ಅಲ್ಲಿ ಬ್ಯಾರಿಕೇಡ್ ಹಾಕುವ ಅಗತ್ಯವಾದರೂ ಏನಿದೆ? ಪೊಲೀಸ್ ಕಮಿಷನರ್ ಕಚೇರಿ ಎದುರಿಗೇ, ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ’ ಎಂದು ಚಿಗರಿ ಬಸ್ ಚಾಲಕರೊಬ್ಬರು ದೂರಿದರು.</p>.<p>‘ಪೊಲೀಸ್ ಕಮಿಷನರ್ ಕಚೇರಿಗೆ ತೆರಳುವಾಗ ಹಾಗೂ ಅಲ್ಲಿಂದ ಬರುವಾಗ ವಾಹನ ಸವಾರರಿಗೆ ಸಮಸ್ಯೆಯಾಗಬಾರದು ಎಂದು, ಪ್ರವೇಶ ದ್ವಾರದ ಬಳಿ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪಘಾತಗಳು ನಡೆಯದಂತೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಅವರ ಕರ್ತವ್ಯ. ಎರಡು ಪಾಳಿಯಲ್ಲಿ ನಿಯೋಜನೆಯಾಗಿರುವ ಅವರು, ಕಮಿಷನರ್, ಡಿಸಿಪಿ, ಎಸಿಪಿಗಳು ಬರುವಾಗ ಮತ್ತು ಹೋಗುವಾಗ ಮಾತ್ರ ಜಾಗೃತರಾಗಿರುತ್ತಾರೆ. ಉಳಿದ ಸಮಯ ಮೊಬೈಲ್ನಲ್ಲಿ ಮಗ್ನರಾಗಿರುತ್ತಾರೆ’ ಎಂದು ಪೊಲೀಸರೇ ಹೇಳುತ್ತಾರೆ.</p>.<div><blockquote> ನವನಗರದ ಬಳಿ ಸಾಕಷ್ಟು ಅಪಘಾತಗಳು ನಡೆಯುತ್ತಿರುವುದರಿಂದ ಬಿಆರ್ಟಿಎಸ್ ಮತ್ತು ಮಿಶ್ರಪಥದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ವಾಹನ ಸವಾರರ ಸಹಕಾರ ಅಗತ್ಯ </blockquote><span class="attribution"> –ರವೀಶ್ ಸಿ.ಆರ್. ಡಿಸಿಪಿ ಸಂಚಾರ ವಿಭಾಗ</span></div>. <p><strong>ಬ್ಯಾರಿಕೇಡ್ ತೆರವಿಗೆ ಆಗ್ರಹ</strong> </p><p>‘ಹುಬ್ಬಳ್ಳಿ–ಧಾರವಾಡ ಮಧ್ಯದ ಬಿಆರ್ಟಿಎಸ್ನ 22 ಕಿ.ಮೀ. ಕಾರಿಡಾರ್ನಲ್ಲಿ ಎಂಟು–ಹತ್ತು ವರ್ಷಗಳಿಂದ ಸಾಕಷ್ಟು ಅಪಘಾತಗಳು ನಡೆದು ಅನೇಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಆದರೂ ಈವರೆಗೆ ಮುಂಜಾಗ್ರತಾ ಕ್ರಮವೆಂದು ಎಲ್ಲಿಯೂ ಬ್ಯಾರಿಕೇಡ್ ಹಾಕಿಲ್ಲ. ಆದರೆ ಪೊಲೀಸ್ ಕಮಿಷನರ್ ಕಚೇರಿ ಎದುರು ಅಪಘಾತ ನಡೆಯಿತು ಎಂದು ಬ್ಯಾರಿಕೇಡ್ ಹಾಕಿರುವುದು ಎಷ್ಟು ಸರಿ? ಇದು ಕಾನೂನು ಬಾಹಿರ ಕ್ರಮವಾಗಿದ್ದು ತಕ್ಷಣ ಅವುಗಳನ್ನು ತೆರವು ಮಾಡಬೇಕು’ ಎಂದು ನವನಗರ ನಿವಾಸಿ ಇಸ್ಮಾಯಿಲ್ ಬೇಪಾರಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>