<p>ಹುಬ್ಬಳ್ಳಿ: ನಗರದ ಅಕ್ಕಿಪೇಟೆಯಲ್ಲಿನ ಪಾರ್ಶ್ವನಾಥ ದಿಗಂಬರ ಜಿನಮಂದಿರದಲ್ಲಿ ಶನಿವಾರ ಪಂಚಕಲ್ಯಾಣ ಮಹೋತ್ಸವವು ಶ್ರಾವಕ, ಶ್ರಾವಕಿಯರ ಸಂಭ್ರಮದೊಂದಿಗೆ ಆರಂಭವಾಯಿತು.</p>.<p>ಇದೇ ವೇಳೆ ಆಚಾರ್ಯ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನೆರವೇರಿತು.</p>.<p>ಜಿನಬಿಂಬಗಳನ್ನು ಎತ್ತಿಕೊಂಡ ಇಂದ್ರ ವೇಷ ಧಾರಿ ಶ್ರಾವಕ ಶ್ರಾವಕಿಯರನ್ನು ಹೊತ್ತ ಆನೆ, ರಥಗಳು ಜಿನಭಕ್ತಿ ಸಂಗೀತದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.</p>.<p>ಮಂಗಲ ಕಲಶ ಸ್ಥಾಪನೆ, ಯಾಗ ಮಂಟಪ ಉದ್ಘಾಟನೆ, ಸಭಾಮಂಟಪ ಉದ್ಘಾಟನೆಗಳು ನಡೆದವು. ಎಸ್ಡಿಎಂನ ಪದ್ಮಲತಾ ನಿರಂಜನ ಕುಮಾರ್ ಅವರು ದೀಪ ಬೆಳಗಿಸಿದರು. ನಂತರ ಜಿನ ಪ್ರತಿಮೆಗಳಿಗೆ ಅಭಿಷೇಕ, ಯಾಗಮಂಡಲ ಆರಾಧನೆ ನಡೆಯಿತು.</p>.<p>ಈ ವೇಳೆ ಆಶೀರ್ವಚನ ನೀಡಿದ ಆಚಾರ್ಯ ಪುಣ್ಯಸಾಗರರು, ‘ಲೋಕ ಕಲ್ಯಾಣಕ್ಕಾಗಿ ಕಾಲಕಾಲಕ್ಕೆ ತೀರ್ಥಂಕರರ ಜನನವಾಗುತ್ತದೆ. ಸಾರ್ವಜನಿಕರ ಸುಖ, ಶಾಂತಿ, ನೆಮ್ಮದಿಗಾಗಿ ಅವರು ಮಾರ್ಗ ತೋರುತ್ತಾರೆ’ ಎಂದರು.</p>.<p>ಭಾನುವಾರ ಜನ್ಮ ಕಲ್ಯಾಣ, ಉತ್ಸವ ಅಭಿಷೇಕ, ರಾಜದರ್ಬಾರ ಹಾಗೂ ದೀಕ್ಷಾ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಿನಾಥ ಹೋತಪೇಟಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-24-866392755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ನಗರದ ಅಕ್ಕಿಪೇಟೆಯಲ್ಲಿನ ಪಾರ್ಶ್ವನಾಥ ದಿಗಂಬರ ಜಿನಮಂದಿರದಲ್ಲಿ ಶನಿವಾರ ಪಂಚಕಲ್ಯಾಣ ಮಹೋತ್ಸವವು ಶ್ರಾವಕ, ಶ್ರಾವಕಿಯರ ಸಂಭ್ರಮದೊಂದಿಗೆ ಆರಂಭವಾಯಿತು.</p>.<p>ಇದೇ ವೇಳೆ ಆಚಾರ್ಯ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನೆರವೇರಿತು.</p>.<p>ಜಿನಬಿಂಬಗಳನ್ನು ಎತ್ತಿಕೊಂಡ ಇಂದ್ರ ವೇಷ ಧಾರಿ ಶ್ರಾವಕ ಶ್ರಾವಕಿಯರನ್ನು ಹೊತ್ತ ಆನೆ, ರಥಗಳು ಜಿನಭಕ್ತಿ ಸಂಗೀತದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.</p>.<p>ಮಂಗಲ ಕಲಶ ಸ್ಥಾಪನೆ, ಯಾಗ ಮಂಟಪ ಉದ್ಘಾಟನೆ, ಸಭಾಮಂಟಪ ಉದ್ಘಾಟನೆಗಳು ನಡೆದವು. ಎಸ್ಡಿಎಂನ ಪದ್ಮಲತಾ ನಿರಂಜನ ಕುಮಾರ್ ಅವರು ದೀಪ ಬೆಳಗಿಸಿದರು. ನಂತರ ಜಿನ ಪ್ರತಿಮೆಗಳಿಗೆ ಅಭಿಷೇಕ, ಯಾಗಮಂಡಲ ಆರಾಧನೆ ನಡೆಯಿತು.</p>.<p>ಈ ವೇಳೆ ಆಶೀರ್ವಚನ ನೀಡಿದ ಆಚಾರ್ಯ ಪುಣ್ಯಸಾಗರರು, ‘ಲೋಕ ಕಲ್ಯಾಣಕ್ಕಾಗಿ ಕಾಲಕಾಲಕ್ಕೆ ತೀರ್ಥಂಕರರ ಜನನವಾಗುತ್ತದೆ. ಸಾರ್ವಜನಿಕರ ಸುಖ, ಶಾಂತಿ, ನೆಮ್ಮದಿಗಾಗಿ ಅವರು ಮಾರ್ಗ ತೋರುತ್ತಾರೆ’ ಎಂದರು.</p>.<p>ಭಾನುವಾರ ಜನ್ಮ ಕಲ್ಯಾಣ, ಉತ್ಸವ ಅಭಿಷೇಕ, ರಾಜದರ್ಬಾರ ಹಾಗೂ ದೀಕ್ಷಾ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಿನಾಥ ಹೋತಪೇಟಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-24-866392755</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>