<p><strong>ಹುಬ್ಬಳ್ಳಿ:</strong> ಎಸ್.ಎಸ್. ಖಾಸನಿಸ್ ಮತ್ತು ಹರ್ಷ ಎಂಟರ್ಪ್ರೈಸೆಸ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರಿಂದ ₹50 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡು ವಂಚಿಸಿದ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಅವರ ಪತ್ನಿ ದೋಷಿಯೆಂದು ಇಲ್ಲಿಯ ಜೆಎಂಎಫ್ಸಿ 2ನೇ ನ್ಯಾಯಾಲಯ ತೀರ್ಪು ನೀಡಿದೆ.</p>.<p>ಕಲಘಟಗಿ ತಾಲ್ಲೂಕಿನಲ್ಲಿ ಗಂಜಿಗಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಂದಾನಪ್ಪ ದುಂದೂರು ಮತ್ತು ಅವರ ಪತ್ನಿ ಶಶಿಕಲಾ ದುಂದೂರು ಶಿಕ್ಷೆಗೆ ಒಳಗಾದ ಅಪರಾಧಿಗಳು.</p>.<p>ಅಂದಾನಪ್ಪ ಅವರಿಗೆ ₹20 ಸಾವಿರ ದಂಡ, ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಶಶಿಕಲಾ ಅವರಿಗೆ ₹10 ಸಾವಿರ ದಂಡ, ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ವಂಚನೆಗೊಳಗಾದವರಿಗೆ ತಲಾ ₹40 ಸಾವಿರ ಪರಿಹಾರ, ಸರ್ಕಾರಕ್ಕೆ ₹2 ಸಾವಿರ ದಂಡ ಭರಿಸುವಂತೆ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಆದೇಶ ನೀಡಿದ್ದಾರೆ.</p>.<p>ಅಂದಾನಪ್ಪ ಮತ್ತು ಶಶಿಕಲಾ ಅವರು ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು, ದ್ವಿಗುಣಗೊಳಿಸಿ ಮರಳಿ ಕೊಡುತ್ತೇವೆ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಅವರಲ್ಲಿ ಹಣ ಕೇಳಿದಾಗ, ಹಣ ಕೊಟ್ಟಿಲ್ಲ ಎಂದು ವಂಚಿಸಿದ್ದರು.</p>.<p>ಈ ಕುರಿತು ಹಣ ನೀಡಿದವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ಸ್ಪೆಕ್ಟರ್ ಆರ್.ಬಿ. ಗಿರಿಯಪ್ಪನವರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-24-1677583114</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಎಸ್.ಎಸ್. ಖಾಸನಿಸ್ ಮತ್ತು ಹರ್ಷ ಎಂಟರ್ಪ್ರೈಸೆಸ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರಿಂದ ₹50 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡು ವಂಚಿಸಿದ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಅವರ ಪತ್ನಿ ದೋಷಿಯೆಂದು ಇಲ್ಲಿಯ ಜೆಎಂಎಫ್ಸಿ 2ನೇ ನ್ಯಾಯಾಲಯ ತೀರ್ಪು ನೀಡಿದೆ.</p>.<p>ಕಲಘಟಗಿ ತಾಲ್ಲೂಕಿನಲ್ಲಿ ಗಂಜಿಗಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಂದಾನಪ್ಪ ದುಂದೂರು ಮತ್ತು ಅವರ ಪತ್ನಿ ಶಶಿಕಲಾ ದುಂದೂರು ಶಿಕ್ಷೆಗೆ ಒಳಗಾದ ಅಪರಾಧಿಗಳು.</p>.<p>ಅಂದಾನಪ್ಪ ಅವರಿಗೆ ₹20 ಸಾವಿರ ದಂಡ, ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಶಶಿಕಲಾ ಅವರಿಗೆ ₹10 ಸಾವಿರ ದಂಡ, ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ವಂಚನೆಗೊಳಗಾದವರಿಗೆ ತಲಾ ₹40 ಸಾವಿರ ಪರಿಹಾರ, ಸರ್ಕಾರಕ್ಕೆ ₹2 ಸಾವಿರ ದಂಡ ಭರಿಸುವಂತೆ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಆದೇಶ ನೀಡಿದ್ದಾರೆ.</p>.<p>ಅಂದಾನಪ್ಪ ಮತ್ತು ಶಶಿಕಲಾ ಅವರು ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು, ದ್ವಿಗುಣಗೊಳಿಸಿ ಮರಳಿ ಕೊಡುತ್ತೇವೆ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಅವರಲ್ಲಿ ಹಣ ಕೇಳಿದಾಗ, ಹಣ ಕೊಟ್ಟಿಲ್ಲ ಎಂದು ವಂಚಿಸಿದ್ದರು.</p>.<p>ಈ ಕುರಿತು ಹಣ ನೀಡಿದವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ಸ್ಪೆಕ್ಟರ್ ಆರ್.ಬಿ. ಗಿರಿಯಪ್ಪನವರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-24-1677583114</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>