<p>ಹುಬ್ಬಳ್ಳಿ–ಧಾರವಾಡ. ರಾಜ್ಯದ ಪ್ರಮುಖ ಅವಳಿ ನಗರಗಳು. ಒಂದರ್ಥದಲ್ಲಿ ಉತ್ತರ ಕರ್ನಾಟಕದ ಪ್ರವೇಶದ್ವಾರಗಳು. ಹುಬ್ಬಳ್ಳಿಗೆ ‘ಛೋಟಾ ಮುಂಬೈ’ ಎಂಬ ಹೆಸರಿದ್ದರೆ, ‘ಸಾಹಿತಿಗಳ ತವರೂರು’ ಎಂದು ಧಾರವಾಡ ಪ್ರಸಿದ್ಧಿ. ರಾಜಧಾನಿ ಬೆಂಗಳೂರು ಬಿಟ್ಟರೆ, ವಾಣಿಜ್ಯ ಮತ್ತು ಕಲೆ–ಸಂಸ್ಕೃತಿ ದೃಷ್ಟಿಯಿಂದ ಇವೆರಡೂ ಪ್ರಮುಖ ನಗರಗಳು.</p><p>ರಾಜ್ಯದ ಇತರೆ ನಗರಗಳಿಗೆ ಹೋಲಿಸಿದರೆ, ಈ ಎರಡೂ ನಗರಗಳಲ್ಲಿ ಅಭಿವೃದ್ಧಿ ಎಂಬುದು ಕಾಗದದಲ್ಲಿ ಮಾತ್ರ ಉಳಿದಿದೆ ಹೊರತು ಅದರ ಸ್ಪರ್ಶ ಕಿಂಚಿತ್ತೂ ಆಗಿಲ್ಲ. ರಸ್ತೆಗಳು ವಿಸ್ತರಣೆಗೊಂಡಿಲ್ಲ, ಬೃಹತ್ ಉದ್ಯಮಗಳು ಬಂದಿಲ್ಲ, ಉದ್ಯಾನಗಳು ಸುಧಾರಿಸಿಲ್ಲ. ಅಷ್ಟೇ ಅಲ್ಲ, ಕಳೆದ ನಾಲ್ಕು ದಶಕಗಳಲ್ಲಿ ಪ್ರಗತಿ ಎಂಬುದು ಇಲ್ಲಿ ಅಕ್ಷರಶಃ ತಟ್ಟಿಲ್ಲ.</p><p>ಕೋಮು ಗಲಭೆ, ದೂರದೃಷ್ಟಿಯ ಕೊರತೆ, ಜಾರಿಯಾಗದ ಯೋಜನೆ, ಕಾಣಸಿಗದ ಸಮರ್ಥ ನಾಯಕತ್ವ ಮುಂತಾದ ಕಾರಣಗಳಿಂದ ದಶಕಗಳಿಂದ ನಲುಗುತ್ತಿರುವ ಈ ಎರಡೂ ನಗರಗಳು ಇನ್ನೂ ಅಂಬೆಗಾಲು ಇಡುತ್ತಲೇ ಇದೆ. ಅತ್ತ ಪೂರ್ಣಪ್ರಮಾಣದಲ್ಲಿ ಮಹಾನಗರ, ಇತ್ತ ಸಂಪೂರ್ಣ ಗ್ರಾಮ ಎಂದು ಕರೆಯಲಾಗದ ಸ್ಥಿತಿಯಲ್ಲಿವೆ.</p><p>ಹುಬ್ಬಳ್ಳಿ ಅಲ್ಲದೇ ಧಾರವಾಡದಲ್ಲೂ ಪ್ರಮುಖ ರಸ್ತೆಗಳು ಇನ್ನೂ ಅಗತ್ಯ ಪ್ರಮಾಣದಲ್ಲಿ ವಿಸ್ತರಣೆಗೊಂಡಿಲ್ಲ. ಹದಗೆಟ್ಟ ರಸ್ತೆಗಳು ವರ್ಷಗಳಾದರೂ ಡಾಂಬರೀಕರಣ ಕಾಣುವುದಿಲ್ಲ. ದೂಳು, ಮೂಲಸೌಲಭ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದುವರೆಗೆ ನಿವಾರಣೆ ಆಗಿಲ್ಲ. ಅಚ್ಚುಕಟ್ಟಾದ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲಿ ಸಮರ್ಪಕ ರೂಪ ಪಡೆದಿಲ್ಲ.</p>.<h3>ಹೂ ಅರಳಲಿಲ್ಲ, ರೈಲು ಚಲಿಸಲಿಲ್ಲ, ಫ್ಲೈಓವರ್ ಮುಗಿಯಲಿಲ್ಲ..</h3><p>ಹುಬ್ಬಳ್ಳಿಯಲ್ಲಿ ಗಾಜಿನ ಮನೆ ಉದ್ಯಾನ ಮತ್ತು ಧಾರವಾಡದಲ್ಲಿ ಸಾಧನಕೇರಿ ಉದ್ಯಾನ ಹೆಸರಿಗೆ ಮಾತ್ರ ಇವೆ ಹೊರತು ಹಸಿರಿಗಿಂತ ತ್ಯಾಜ್ಯ ರಾಶಿಯೇ ಹೆಚ್ಚು ಕಣ್ಣಿಗೆ ರಾಚುತ್ತದೆ. ಉಣಕಲ್ ಕೆರೆ ಉದ್ಯಾನದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ಮೂರು ಉದ್ಯಾನಗಳಿಗೆ ಪ್ರವೇಶಿಸಲು ಟಿಕೆಟ್ ಖರೀದಿಸಬೇಕು. ಆದರೆ, ಸೌಲಭ್ಯಗಳು ಮಾತ್ರ ಕೇಳುವಂತಿಲ್ಲ. ಬೆಂಗಳೂರು, ಬೆಳಗಾವಿ, ಕಲಬುರಗಿ ಅಥವಾ ಬೇರೆ ಊರುಗಳ ಉದ್ಯಾನಗಳಲ್ಲಿ ಮಕ್ಕಳಿಗಾಗಿ ಜೋಕಾಲಿ, ಜಾರುಗುಂಡಿ ಸೇರಿ ಇನ್ನಿತರ ಸೌಲಭ್ಯ ಇರುತ್ತವೆ. ಆದರೆ, ಇಲ್ಲಿ ಅವು ಬಳಸಲೂ ಆಗದ ಸ್ಥಿತಿಯಲ್ಲಿವೆ. ಕನಿಷ್ಠ ಶುಚಿಯಾದರೂ ಇರುತ್ತವೆ. ಗಾಜಿನ ಮನೆ ಉದ್ಯಾನದ ಆವರಣದಲ್ಲಿ ವರ್ಷಗಳ ಹಿಂದೆ ಪುಟಾಣಿ ರೈಲು ಉದ್ಘಾಟನೆ ದಿನವೇ ಹಳಿ ತಪ್ಪಿತು. ಮತ್ತೆ ಚಲಿಸಲೇ ಇಲ್ಲ.</p><p>ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿ ಇರಿಸಿಕೊಂಡು ಒಟ್ಟು 4 ಕಿ.ಮೀ ಮೇಲ್ಸೇತುವೆ ಉದ್ದದ ನಿರ್ಮಾಣಕ್ಕೆ 2021ರ ಜೂನ್ನಲ್ಲಿ ಕಾರ್ಯಾದೇಶ ಸಿಕ್ಕಿದೆ. ಆದರೆ, 4 ವರ್ಷಗಳಾದರೂ ಎಲ್ಲವೂ ಅಪೂರ್ಣವಾಗಿಯೇ ಉಳಿದಿದೆ. ಒಟ್ಟು ₹ 349.49 ಕೋಟಿ ವೆಚ್ಚದ ಈ ಯೋಜನೆಯು 2024ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಣಿ ಚನ್ನಮ್ಮ ವೃತ್ತದ ಸುತ್ತಮುತ್ತಲ ಸ್ಥಳ ವಿರೂಪಗೊಂಡಿದೆ. ಅಲ್ಲಲ್ಲಿ ಬೃಹತ್ ಸ್ತಂಭಗಳು ಕಾಣಸಿಗುತ್ತವೆ. ದೂಳು, ಮಾಲಿನ್ಯ, ವಾಹನ ದಟ್ಟಣೆ ಹೆಚ್ಚಾಗಿದೆ ಹೊರತು ಮೇಲ್ಸೇತುವೆ ಪೂರ್ಣಗೊಳ್ಳುವ ಲಕ್ಷಣ ಮಾತ್ರ ಕಾಣುತ್ತಿಲ್ಲ.</p>.<h3>ಚಿಗರಿಯಂತೆ ಓಡದ ಬಸ್..</h3><p>‘ಹುಬ್ಬಳ್ಳಿ–ಧಾರವಾಡ ಮಧ್ಯೆ ಹವಾನಿಯಂತ್ರಿತ (ಎ.ಸಿ) ಬಸ್ಗಳಲ್ಲಿ ಪ್ರಯಾಣಿಸಬಹುದು. ಒಂದರ್ಥದಲ್ಲಿ ಹೈಟೆಕ್ ಸೌಲಭ್ಯ’ ಎಂದೆಲ್ಲ ಹೇಳಿ 2018ರಲ್ಲಿ ₹ 970 ಕೋಟಿ ವೆಚ್ಚದಲ್ಲಿ ಬಿಆರ್ಟಿಎಸ್ ‘ಚಿಗರಿ’ ಬಸ್ ಸೇವೆ ಆರಂಭಿಸಲಾಯಿತು. ಅದಕ್ಕೆ ರಸ್ತೆಬದಿಯ ಮರಗಳ ಮಾರಣಹೋಮವಾಯಿತು. ರಸ್ತೆ ವಿಸ್ತರಣೆಗೊಂಡಿತು. ರಸ್ತೆಯ ನಟ್ಟುನಡುವೆ ಈ ಬಸ್ಗಳಿಗಷ್ಟೇ ವಿಶೇಷ ಕಾರಿಡಾರ್ ನಿರ್ಮಿಸಿ, ಅಲ್ಲಿ ಬಸ್ ತಂಗುದಾಣಗಳನ್ನು ಕಲ್ಪಿಸಲಾಯಿತು. ಆದರೆ, 7 ವರ್ಷಗಳಲ್ಲಿಯೇ ಈ ಯೋಜನೆ ವಿಫಲಗೊಂಡಿದೆ. ಕೆಲ ಬಸ್ಗಳಲ್ಲಿ ಎ.ಸಿ ಇರಲ್ಲ, ಇನ್ನೂ ಕೆಲ ಬಸ್ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ.</p><p> ‘ಗುಜರಾತ್ ಸೇರಿ ಕೆಲ ರಾಜ್ಯಗಳಲ್ಲಿ ವಿಫಲವಾದ ಬಿಆರ್ಟಿಎಸ್ ಯೋಜನೆಯನ್ನು ನಮ್ಮ ಪ್ರತಿರೋಧದ ನಡುವೆಯೇ ಅನುಷ್ಠಾನವಾಯಿತು. ಅವೈಜ್ಞಾನಿಕ ಕಾರಿಡಾರ್ ಮತ್ತು ಬಸ್ಗಳ ಅತಿಯಾದ ವೇಗದ ಸಂಚಾರದಿಂದ ನೂರಾರು ಮಂದಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡರು’ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ. ಅವರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ.</p>.<h3>ಹೋರಾಟದ ಆ ದಿನಗಳು..</h3><p>1980-90ರ ದಶಕದಲ್ಲಿ ಈ ಎರಡೂ ನಗರಗಳಲ್ಲಿ ಹೋರಾಟಗಳು ನಿರಂತರ ನಡೆಯುತ್ತಿದ್ದವು. ಇಡ್ಲಿ ಅಥವಾ ಚಹಾ ದರ 50 ಪೈಸೆ ಅಥವಾ ₹ 1 ಹೆಚ್ಚಾದರೂ ಜನರು ಬೀದಿಗಿಳಿಯುತ್ತಿದ್ದರು. ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುತ್ತಿದ್ದರು. ಆಗಿನ ಕಮ್ಯುನಿಸ್ಟ್ ನಾಯಕ ಎ.ಜೆ.ಮುಧೋಳ, ಪತ್ರಕರ್ತ ಪಾಟೀಲ ಪುಟ್ಟಪ್ಪ ಸೇರಿ ಹಲವರ ನಾಯಕತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಚಳವಳಿಗಳು ನಡೆಯುತ್ತಿದ್ದವು. ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತಿತ್ತು. ಈಗ ಹೋರಾಟಗಳು ಕಣ್ಮರೆಯಾಗಿವೆ. ಧ್ವನಿ ಎತ್ತುವವರು ಕೂಡ ಕಾಣುವುದಿಲ್ಲ.</p><p>1994ರಲ್ಲಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ವಿಷಯವು ಹಿಂಸಾ ಸ್ವರೂಪ ಪಡೆದು, ಕೋಮು ಗಲಭೆಗೆ ಕಾರಣವಾಯಿತು. ಕರ್ಫ್ಯೂ ಜಾರಿಯಾಯಿತು. ಘರ್ಷಣೆಯಲ್ಲಿ 6 ಮಂದಿ ಹತರಾದರು. ಇವೆಲ್ಲ ನಡೆದು 30ಕ್ಕೂ ಹೆಚ್ಚು ವರ್ಷಗಳು ಗತಿಸಿದರೂ ಈದ್ಗಾ ಮೈದಾನ ಇನ್ನೂ ಕೇಂದ್ರಬಿಂದುವಾಗಿದೆ. ಈಗ ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಅಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪೈಪೋಟಿ ಏರ್ಪಡುತ್ತದೆ. ಬದುಕಲು ಸೌಲಭ್ಯ ಕಲ್ಪಿಸಿ ಎಂದು ಕೇಳುವುದಕ್ಕಿಂತ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಿ ಎಂದು ಪ್ರತಿಭಟನೆ ನಡೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ–ಧಾರವಾಡ. ರಾಜ್ಯದ ಪ್ರಮುಖ ಅವಳಿ ನಗರಗಳು. ಒಂದರ್ಥದಲ್ಲಿ ಉತ್ತರ ಕರ್ನಾಟಕದ ಪ್ರವೇಶದ್ವಾರಗಳು. ಹುಬ್ಬಳ್ಳಿಗೆ ‘ಛೋಟಾ ಮುಂಬೈ’ ಎಂಬ ಹೆಸರಿದ್ದರೆ, ‘ಸಾಹಿತಿಗಳ ತವರೂರು’ ಎಂದು ಧಾರವಾಡ ಪ್ರಸಿದ್ಧಿ. ರಾಜಧಾನಿ ಬೆಂಗಳೂರು ಬಿಟ್ಟರೆ, ವಾಣಿಜ್ಯ ಮತ್ತು ಕಲೆ–ಸಂಸ್ಕೃತಿ ದೃಷ್ಟಿಯಿಂದ ಇವೆರಡೂ ಪ್ರಮುಖ ನಗರಗಳು.</p><p>ರಾಜ್ಯದ ಇತರೆ ನಗರಗಳಿಗೆ ಹೋಲಿಸಿದರೆ, ಈ ಎರಡೂ ನಗರಗಳಲ್ಲಿ ಅಭಿವೃದ್ಧಿ ಎಂಬುದು ಕಾಗದದಲ್ಲಿ ಮಾತ್ರ ಉಳಿದಿದೆ ಹೊರತು ಅದರ ಸ್ಪರ್ಶ ಕಿಂಚಿತ್ತೂ ಆಗಿಲ್ಲ. ರಸ್ತೆಗಳು ವಿಸ್ತರಣೆಗೊಂಡಿಲ್ಲ, ಬೃಹತ್ ಉದ್ಯಮಗಳು ಬಂದಿಲ್ಲ, ಉದ್ಯಾನಗಳು ಸುಧಾರಿಸಿಲ್ಲ. ಅಷ್ಟೇ ಅಲ್ಲ, ಕಳೆದ ನಾಲ್ಕು ದಶಕಗಳಲ್ಲಿ ಪ್ರಗತಿ ಎಂಬುದು ಇಲ್ಲಿ ಅಕ್ಷರಶಃ ತಟ್ಟಿಲ್ಲ.</p><p>ಕೋಮು ಗಲಭೆ, ದೂರದೃಷ್ಟಿಯ ಕೊರತೆ, ಜಾರಿಯಾಗದ ಯೋಜನೆ, ಕಾಣಸಿಗದ ಸಮರ್ಥ ನಾಯಕತ್ವ ಮುಂತಾದ ಕಾರಣಗಳಿಂದ ದಶಕಗಳಿಂದ ನಲುಗುತ್ತಿರುವ ಈ ಎರಡೂ ನಗರಗಳು ಇನ್ನೂ ಅಂಬೆಗಾಲು ಇಡುತ್ತಲೇ ಇದೆ. ಅತ್ತ ಪೂರ್ಣಪ್ರಮಾಣದಲ್ಲಿ ಮಹಾನಗರ, ಇತ್ತ ಸಂಪೂರ್ಣ ಗ್ರಾಮ ಎಂದು ಕರೆಯಲಾಗದ ಸ್ಥಿತಿಯಲ್ಲಿವೆ.</p><p>ಹುಬ್ಬಳ್ಳಿ ಅಲ್ಲದೇ ಧಾರವಾಡದಲ್ಲೂ ಪ್ರಮುಖ ರಸ್ತೆಗಳು ಇನ್ನೂ ಅಗತ್ಯ ಪ್ರಮಾಣದಲ್ಲಿ ವಿಸ್ತರಣೆಗೊಂಡಿಲ್ಲ. ಹದಗೆಟ್ಟ ರಸ್ತೆಗಳು ವರ್ಷಗಳಾದರೂ ಡಾಂಬರೀಕರಣ ಕಾಣುವುದಿಲ್ಲ. ದೂಳು, ಮೂಲಸೌಲಭ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದುವರೆಗೆ ನಿವಾರಣೆ ಆಗಿಲ್ಲ. ಅಚ್ಚುಕಟ್ಟಾದ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲಿ ಸಮರ್ಪಕ ರೂಪ ಪಡೆದಿಲ್ಲ.</p>.<h3>ಹೂ ಅರಳಲಿಲ್ಲ, ರೈಲು ಚಲಿಸಲಿಲ್ಲ, ಫ್ಲೈಓವರ್ ಮುಗಿಯಲಿಲ್ಲ..</h3><p>ಹುಬ್ಬಳ್ಳಿಯಲ್ಲಿ ಗಾಜಿನ ಮನೆ ಉದ್ಯಾನ ಮತ್ತು ಧಾರವಾಡದಲ್ಲಿ ಸಾಧನಕೇರಿ ಉದ್ಯಾನ ಹೆಸರಿಗೆ ಮಾತ್ರ ಇವೆ ಹೊರತು ಹಸಿರಿಗಿಂತ ತ್ಯಾಜ್ಯ ರಾಶಿಯೇ ಹೆಚ್ಚು ಕಣ್ಣಿಗೆ ರಾಚುತ್ತದೆ. ಉಣಕಲ್ ಕೆರೆ ಉದ್ಯಾನದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ಮೂರು ಉದ್ಯಾನಗಳಿಗೆ ಪ್ರವೇಶಿಸಲು ಟಿಕೆಟ್ ಖರೀದಿಸಬೇಕು. ಆದರೆ, ಸೌಲಭ್ಯಗಳು ಮಾತ್ರ ಕೇಳುವಂತಿಲ್ಲ. ಬೆಂಗಳೂರು, ಬೆಳಗಾವಿ, ಕಲಬುರಗಿ ಅಥವಾ ಬೇರೆ ಊರುಗಳ ಉದ್ಯಾನಗಳಲ್ಲಿ ಮಕ್ಕಳಿಗಾಗಿ ಜೋಕಾಲಿ, ಜಾರುಗುಂಡಿ ಸೇರಿ ಇನ್ನಿತರ ಸೌಲಭ್ಯ ಇರುತ್ತವೆ. ಆದರೆ, ಇಲ್ಲಿ ಅವು ಬಳಸಲೂ ಆಗದ ಸ್ಥಿತಿಯಲ್ಲಿವೆ. ಕನಿಷ್ಠ ಶುಚಿಯಾದರೂ ಇರುತ್ತವೆ. ಗಾಜಿನ ಮನೆ ಉದ್ಯಾನದ ಆವರಣದಲ್ಲಿ ವರ್ಷಗಳ ಹಿಂದೆ ಪುಟಾಣಿ ರೈಲು ಉದ್ಘಾಟನೆ ದಿನವೇ ಹಳಿ ತಪ್ಪಿತು. ಮತ್ತೆ ಚಲಿಸಲೇ ಇಲ್ಲ.</p><p>ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿ ಇರಿಸಿಕೊಂಡು ಒಟ್ಟು 4 ಕಿ.ಮೀ ಮೇಲ್ಸೇತುವೆ ಉದ್ದದ ನಿರ್ಮಾಣಕ್ಕೆ 2021ರ ಜೂನ್ನಲ್ಲಿ ಕಾರ್ಯಾದೇಶ ಸಿಕ್ಕಿದೆ. ಆದರೆ, 4 ವರ್ಷಗಳಾದರೂ ಎಲ್ಲವೂ ಅಪೂರ್ಣವಾಗಿಯೇ ಉಳಿದಿದೆ. ಒಟ್ಟು ₹ 349.49 ಕೋಟಿ ವೆಚ್ಚದ ಈ ಯೋಜನೆಯು 2024ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಣಿ ಚನ್ನಮ್ಮ ವೃತ್ತದ ಸುತ್ತಮುತ್ತಲ ಸ್ಥಳ ವಿರೂಪಗೊಂಡಿದೆ. ಅಲ್ಲಲ್ಲಿ ಬೃಹತ್ ಸ್ತಂಭಗಳು ಕಾಣಸಿಗುತ್ತವೆ. ದೂಳು, ಮಾಲಿನ್ಯ, ವಾಹನ ದಟ್ಟಣೆ ಹೆಚ್ಚಾಗಿದೆ ಹೊರತು ಮೇಲ್ಸೇತುವೆ ಪೂರ್ಣಗೊಳ್ಳುವ ಲಕ್ಷಣ ಮಾತ್ರ ಕಾಣುತ್ತಿಲ್ಲ.</p>.<h3>ಚಿಗರಿಯಂತೆ ಓಡದ ಬಸ್..</h3><p>‘ಹುಬ್ಬಳ್ಳಿ–ಧಾರವಾಡ ಮಧ್ಯೆ ಹವಾನಿಯಂತ್ರಿತ (ಎ.ಸಿ) ಬಸ್ಗಳಲ್ಲಿ ಪ್ರಯಾಣಿಸಬಹುದು. ಒಂದರ್ಥದಲ್ಲಿ ಹೈಟೆಕ್ ಸೌಲಭ್ಯ’ ಎಂದೆಲ್ಲ ಹೇಳಿ 2018ರಲ್ಲಿ ₹ 970 ಕೋಟಿ ವೆಚ್ಚದಲ್ಲಿ ಬಿಆರ್ಟಿಎಸ್ ‘ಚಿಗರಿ’ ಬಸ್ ಸೇವೆ ಆರಂಭಿಸಲಾಯಿತು. ಅದಕ್ಕೆ ರಸ್ತೆಬದಿಯ ಮರಗಳ ಮಾರಣಹೋಮವಾಯಿತು. ರಸ್ತೆ ವಿಸ್ತರಣೆಗೊಂಡಿತು. ರಸ್ತೆಯ ನಟ್ಟುನಡುವೆ ಈ ಬಸ್ಗಳಿಗಷ್ಟೇ ವಿಶೇಷ ಕಾರಿಡಾರ್ ನಿರ್ಮಿಸಿ, ಅಲ್ಲಿ ಬಸ್ ತಂಗುದಾಣಗಳನ್ನು ಕಲ್ಪಿಸಲಾಯಿತು. ಆದರೆ, 7 ವರ್ಷಗಳಲ್ಲಿಯೇ ಈ ಯೋಜನೆ ವಿಫಲಗೊಂಡಿದೆ. ಕೆಲ ಬಸ್ಗಳಲ್ಲಿ ಎ.ಸಿ ಇರಲ್ಲ, ಇನ್ನೂ ಕೆಲ ಬಸ್ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ.</p><p> ‘ಗುಜರಾತ್ ಸೇರಿ ಕೆಲ ರಾಜ್ಯಗಳಲ್ಲಿ ವಿಫಲವಾದ ಬಿಆರ್ಟಿಎಸ್ ಯೋಜನೆಯನ್ನು ನಮ್ಮ ಪ್ರತಿರೋಧದ ನಡುವೆಯೇ ಅನುಷ್ಠಾನವಾಯಿತು. ಅವೈಜ್ಞಾನಿಕ ಕಾರಿಡಾರ್ ಮತ್ತು ಬಸ್ಗಳ ಅತಿಯಾದ ವೇಗದ ಸಂಚಾರದಿಂದ ನೂರಾರು ಮಂದಿ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡರು’ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ. ಅವರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ.</p>.<h3>ಹೋರಾಟದ ಆ ದಿನಗಳು..</h3><p>1980-90ರ ದಶಕದಲ್ಲಿ ಈ ಎರಡೂ ನಗರಗಳಲ್ಲಿ ಹೋರಾಟಗಳು ನಿರಂತರ ನಡೆಯುತ್ತಿದ್ದವು. ಇಡ್ಲಿ ಅಥವಾ ಚಹಾ ದರ 50 ಪೈಸೆ ಅಥವಾ ₹ 1 ಹೆಚ್ಚಾದರೂ ಜನರು ಬೀದಿಗಿಳಿಯುತ್ತಿದ್ದರು. ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುತ್ತಿದ್ದರು. ಆಗಿನ ಕಮ್ಯುನಿಸ್ಟ್ ನಾಯಕ ಎ.ಜೆ.ಮುಧೋಳ, ಪತ್ರಕರ್ತ ಪಾಟೀಲ ಪುಟ್ಟಪ್ಪ ಸೇರಿ ಹಲವರ ನಾಯಕತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಚಳವಳಿಗಳು ನಡೆಯುತ್ತಿದ್ದವು. ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತಿತ್ತು. ಈಗ ಹೋರಾಟಗಳು ಕಣ್ಮರೆಯಾಗಿವೆ. ಧ್ವನಿ ಎತ್ತುವವರು ಕೂಡ ಕಾಣುವುದಿಲ್ಲ.</p><p>1994ರಲ್ಲಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ವಿಷಯವು ಹಿಂಸಾ ಸ್ವರೂಪ ಪಡೆದು, ಕೋಮು ಗಲಭೆಗೆ ಕಾರಣವಾಯಿತು. ಕರ್ಫ್ಯೂ ಜಾರಿಯಾಯಿತು. ಘರ್ಷಣೆಯಲ್ಲಿ 6 ಮಂದಿ ಹತರಾದರು. ಇವೆಲ್ಲ ನಡೆದು 30ಕ್ಕೂ ಹೆಚ್ಚು ವರ್ಷಗಳು ಗತಿಸಿದರೂ ಈದ್ಗಾ ಮೈದಾನ ಇನ್ನೂ ಕೇಂದ್ರಬಿಂದುವಾಗಿದೆ. ಈಗ ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಅಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪೈಪೋಟಿ ಏರ್ಪಡುತ್ತದೆ. ಬದುಕಲು ಸೌಲಭ್ಯ ಕಲ್ಪಿಸಿ ಎಂದು ಕೇಳುವುದಕ್ಕಿಂತ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಿ ಎಂದು ಪ್ರತಿಭಟನೆ ನಡೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>