ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾರವಾರ ನಗರ ತಂಡ 34 ಓವರ್ಗಳಲ್ಲಿ 89 ರನ್ ಗಳಿಸಿತ್ತು. ಧಾರವಾಡ ನಗರ ತಂಡದ ತೇಜಸ್ ಮುರ್ಡೇಶ್ವರ, ನಿತೀಶ ಪಾಲಂಕರ ತಲಾ ಮೂರು ವಿಕೆಟ್ ಉರುಳಿಸಿದರೆ, ಎಂ.ಎಸ್. ಮನೀಷ ಎರಡು ವಿಕೆಟ್ ಪಡೆದು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡ 24.1 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.