‘ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ 71 ಪ್ರಕರಣಗಳಿವೆ. ಅರ್ಕಾವತಿ ಬಡಾವಣೆಯಲ್ಲಿ 900 ಎಕರೆ ಭೂ ಸ್ವಾಧೀನ ಮಾಡಿದ ಕುರಿತು ಕೆಂಪಣ್ಣನವರ ಆಯೋಗ ವರದಿಯಲ್ಲಿ ಏನಿದೆ ಎಂಬುದು ಕೂಡ ಬಹಿರಂಗವಾಗಿಲ್ಲ. ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆದರೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುತ್ತಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಯಮ್ಮ ಘನತೆಯಿಂದ ಮಾತನಾಡಲಿ’ ಎಂದು ಎಚ್ಚರಿಕೆ ನೀಡಿದರು.