ಮೈಂಡ್ ಟ್ರೀ ಕಂಪನಿ ಸಹ ಸಂಸ್ಥಾಪಕ ಸುಬ್ರೊತೊ ಬಾಗಚಿ ಘಟಿಕೋತ್ಸವ ಭಾಷಣ ಮಾಡಿದರು. ‘ದೇಶದಲ್ಲಿ ಬಡತನದಿಂದಾಗಿ ಓದು ಮೊಟಕುಗೊಳಿಸುವವರ ಸಂಖ್ಯೆ ದೊಡ್ಡದು. ಪ್ರೌಢಶಾಲೆ ಹಂತದಲ್ಲಿ
ಶೇ 30ರಷ್ಟು ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುತ್ತಾರೆ. ಇವರಲ್ಲಿ ಶೇ 80ರಷ್ಟು ಮಂದಿಗೆ ಕೌಶಲ ಆಧಾರಿತ ಶಿಕ್ಷಣ ದೊರೆತರೆ, ಉದ್ಯೋಗಾರ್ಹತೆ ನೀಡಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.