‘ಕಮ್ಯುನಿಸಂ ಹೆಸರಲ್ಲಿ ರಷ್ಯಾದಲ್ಲಿ ಅಧಿಕಾರಕ್ಕೆ ಬಂದ ವ್ಲಾಡಿಮಿರ್ ಪುಟಿನ್, ಭಾವನೆಯೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಯಾರ ಮಾತು ಕೇಳದ ಅವರು ಯುದ್ದೋನ್ಮಾದದಲ್ಲಿದ್ದಾರೆ. ಇದು ವಿನಾಶದ ಪ್ರತೀಕ. ಪ್ರಗತಿ ಎಂದರೆ ಪ್ರೀತಿಯಿಂದ ಬದುಕುವುದು. ಅದು ಅಂತರಂಗದ ಪ್ರತೀಕ. ಅದಕ್ಕೆ ಮತ, ಜಾತಿ, ಧರ್ಮದ ಯಾವ ಎಲ್ಲೆಯೂ ಇಲ್ಲ. ಅದುವೇ ಕಾವ್ಯ. ಪ್ರೀತಿಯ ಅರಿವೆ ಸಾಹಿತ್ಯದ ಅರಿವು. ಪ್ರೀತಿ ಇಲ್ಲದೆ ಏನೂ ಇಲ್ಲ. ಇಂತಹ ಸೂಕ್ಷ್ಮ ಭಾವವನ್ನು ಗಂಗಪ್ಪ ವಾಲಿ ಅವರು ಸೌಮ್ಯವಾಗಿ ಹೇಳುತ್ತಿದ್ದರು’ ಎಂದರು.