‘ಅವರು ಕೂಡ (ಆರ್ಎಸ್ಎಸ್ನವರು) ದೇಶದ ನಾಗರಿಕರು. ಅವರು ಕಠಿಣ ಶ್ರಮ ಪಟ್ಟಿದ್ದಾರಾದರೂ ಅದನ್ನು ಪೂರ್ತಿಯಾಗಿ ಗುರುತಿಸಲಾಗಿಲ್ಲ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಸಮಾಜ ಸೇವೆ ಮಾಡಿದವರು ಆರ್ಎಸ್ಎಸ್ನವರು ಎಂಬುದು ನನ್ನ ಭಾವನೆ. ಎನ್ಡಿಎ ದೇಶದ್ರೋಹಿ ಅಮರ್ತ್ಯ ಸೇನ್ ಅವರಿಗೆ ಅದನ್ನು (ಭಾರತ ರತ್ನ) ನೀಡಿತು. ಅವರು ನಲಂದಾ ವಿಶ್ವವಿದ್ಯಾಲಯವನ್ನು ಕೊಳ್ಳೆ ಹೊಡೆದಿದ್ದು ಬಿಟ್ಟರೆ ದೇಶಕ್ಕಾಗಿ ಏನು ಮಾಡಿದ್ದಾರೆ’ ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ ಎಂಬುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.