‘ಗ್ರಾಹರಿಕರಿಗೆ ಮೊದಲೇ ಉತ್ಪನ್ನಗಳ ದರ ಹೇಳಿರುತ್ತೇವೆ. ಇಂಧನ ದರ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಆದರೆ, ಗ್ರಾಹಕರಿಗೆ ಮೊದಲು ತಿಳಿಸಿದ ದರದಲ್ಲೇ ನೀಡಬೇಕಿದ್ದು, ನಮಗೆ ಹೊರೆಯಾಗು ತ್ತಿದೆ. ಲಾಭವಿರಲಿ; ನಿರೀಕ್ಷಿತ ಆದಾಯವೂ ಕೈ ಸೇರುತ್ತಿಲ್ಲ. ಬ್ಯಾಂಕ್, ಫೈನಾನ್ಸ್ ಗಳ ನಿಗದಿತ ಕಂತು ಪಾವತಿಸಬೇಕು. ಕಾರ್ಮಿಕರಿಗೆ ವೇತನ ಸೇರಿದಂತೆ ಇತರೆ ಖರ್ಚುಗಳಿಂದ ನಷ್ಟವೇ ಹೆಚ್ಚುತ್ತಿದೆ’ ಎಂದು ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಜಿ. ಭಟ್ ತಿಳಿಸಿದರು.