ಈ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರು ಆದೇಶಿಸಿ, ‘ದೂರಿನಲ್ಲಿ ಹೊರಟ್ಟಿ ಅವರ ಹೆಸರು ಇಲ್ಲದಿದ್ದರೂ, ಅವರ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿರುವುದು ಕರ್ತವ್ಯ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನದ ವರ್ತನೆಯಾಗಿದೆ. ಈ ಕುರಿತು ಇಲಾಖಾ ತನಿಖೆ ಬಾಕಿ ಇರಿಸಿಕೊಂಡು ಇನ್ಸ್ಪೆಕ್ಟರ್ ಶ್ರೀಧರ ಅವರನ್ನು ಅಮಾನತು ಮಾಡಲಾಗಿದೆ‘ ಎಂದಿದ್ದಾರೆ.