ಮಹಾರಾಷ್ಟ್ರದ ಕೊಲ್ಹಾಪುರದ ರೋಹಿಕರ ಕಾಲೊನಿಯ ಅಮರ ಅಂಬೇಕರ (27), ಕಾಗಲ ಜಿಲ್ಲೆ ಬೆಲ್ಲೋಳಿ ಬಾಚಲಿಯ ಧೈರ್ಯವಂತ ಪಾಟೀಲ (42), ಬಾಬಸೋ ಪಾಟೀಲ (31), ಚಿಕ್ಕೋಡಿ ತಾಲ್ಲೂಕು ಕಲ್ಲೋಳಿಯ ಅಶೋಕ ತೇಲಿ (50) ಮತ್ತು ನಿಪ್ಪಾಣಿಯ ಗಟ್ಟಿಗಲ್ಲಿಯ ರಾಜೇಶ ಮೋಹಿತೆ (48) ಬಂಧಿತರು. ಅವರನ್ನು ಹುಕ್ಕೇರಿ ತಾಲ್ಲೂಕಿನ ಕಮತನೂರು ಕ್ರಾಸ್ ಬಳಿ ಬಂಧಿಸಲಾಗಿದೆ. ದಾಳಿ ಕಾಲಕ್ಕೆ ಒಬ್ಬ ಆರೋಪಿ ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.