ಪಂಪ್ ಅನ್ನು ದುರಸ್ತಿಗೆ ಕೊಂಡೊಯ್ದಿದ್ದ ಜಲಮಂಡಳಿ ಅಧಿಕಾರಿಗಳು, ಬಾವಿಗೆ ಪ್ಲಾಸ್ಟಿಕ್ನಿಂದ ಮುಚ್ಚಿ ಮೇಲ್ಭಾಗಕ್ಕೆ ಕಲ್ಲು ಇಟ್ಟಿದ್ದರು. ಆದರೆ, ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಪ್ಲಾಸ್ಟಿಕ್ ಹರಿದು ಹೋಗಿ, ಕಲ್ಲು ಪಕ್ಕಕ್ಕೆ ಬಿದ್ದಿದ್ದರಿಂದ ಬಾವಿ ತೆರೆದುಕೊಂಡಿತ್ತು. ದೇವಸ್ಥಾನದ ಬಳಿ, ಮಕ್ಕಳು ಆಟವಾಡಲು ಬರುತ್ತಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.