ಸ್ವಸಹಾಯ ಗುಂಪು, ಮಹಿಳಾ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತೆಯರು ಪೂರ್ಣ ಕುಂಭ ಹೊತ್ತಿದ್ದಾರೆ. ಮೆರವಣಿಗೆಯು ಕರ್ನಾಟಕ ಕಾಲೇಜಿನಿಂದ ಆರಂಭಗೊಂಡಿದ್ದು, ಆಲೂರು ವೆಂಕಟರಾವ್ ವೃತ್ತ, ಪಾಲಿಕೆ ವೃತ್ತ, ಡಾ. ಆ್ಯನಿಬೆಸೆಂಟ್ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಸಮ್ಮೇಳನ ಜರುಗಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣ ತಲುಪಲಿದೆ.