‘ಒಂದೇ ಬೆಳೆಗೆ ರೈತರು ಜೋತು ಬೀಳಬಾರದು. ನುಗ್ಗೆಕಾಯಿ, ತೇಗು ಬೆಳೆಯಬೇಕು. ನುಗ್ಗೆಕಾಯಿಯಲ್ಲಿ ಎಲ್ಲ ರೀತಿಯ ಪೋಷಕಾಂಶಗಳಿರುತ್ತವೆ. ತಾಯಿಯ ಎದೆಹಾಲಿಗಿಂತಲೂ ಉತ್ಕೃಷ್ಟವಾಗಿರುತ್ತದೆ. ರೈತರು ಕೃಷಿ ಅರಣ್ಯದ ಬಗ್ಗೆ ಗಮನಹರಿಸಬೇಕು. ಇದರಿಂದ, ಲಕ್ಷಾಂತರ ರೂಪಾಯಿ ಆದಾಯ ದೊರೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸಹ ಮೂರು ಲಕ್ಷ ರೈತರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ರೈತರಿಗೆ ಪ್ರೇರಣೆ ನೀಡುವಂತಾಗಬೇಕು’ ಎಂದು ಸಲಹೆ ನೀಡಿದರು.