<p><strong>ಹುಬ್ಬಳ್ಳಿ</strong>: ಹುಬ್ಬಳ್ಳಿ ನಗರ ಸೇರಿದಂತೆ ಧಾರವಾಡ, ಬಳ್ಳಾರಿ, ವಿಜಯನಗರ, ಉತ್ತರ ಕನ್ನಡ, ಬೆಳಗಾವಿ, ವಿಜಯ ಪುರ ಜಿಲ್ಲೆ ಒಳಗೊಂಡು ಕಿತ್ತೂರು, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ವ್ಯಾಪಕ ಮಳೆ ಆಗಿದೆ.</p>.<p>ಧಾರವಾಡ ಜಿಲ್ಲೆಯ ಕೆಲವೆಡೆ ಮಳೆಯೊಂದಿಗೆ ಗುಡುಗು, ಮಿಂಚಿನ ಆರ್ಭಟ ಜೋರು ಇತ್ತು. ಧಾರವಾಡ ನಗರದಲ್ಲಿ 1 ಸೆಂ.ಮೀ., ಮಳೆಯಾಗಿದೆ.</p>.<p>8 ಮನೆಗಳಿಗೆ ಹಾನಿ: ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ. ಸಿಡಿಲು ಬಡಿದು ಸಂಡೂರಿನಲ್ಲಿ 2 ಎಮ್ಮೆಗಳು ಮೃತಪಟ್ಟಿವೆ. ‘ಕಂಪ್ಲಿಯಲ್ಲಿ–4, ಸಿರುಗುಪ್ಪ –3, ಸಂಡೂರಿನಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ.</p>.<p>2 ವಿದ್ಯುತ್ ಪರಿವರ್ತಕ, 3 ವಿದ್ಯುತ್ ಕಂಬಗಳು, 28 ಮರಗಳು ಉರುಳಿವೆ’ ಎಂದು ಕಂದಾಯ ಇಲಾಖೆ ತಿಳಿಸಿದೆ. ಸಂಡೂರು ತಾಲ್ಲೂಕಿನಲ್ಲಿ 2.1 ಹೆಕ್ಟೇರ್ನಲ್ಲಿ ಹತ್ತಿ ಬೆಳೆ ನಾಶವಾಗಿದೆ.</p>.<p><strong>ಹೊಸಪೇಟೆ ವರದಿ:</strong> ತಾಲ್ಲೂಕಿನ ಧರ್ಮಸಾಗರ, ಭುವನಹಳ್ಳಿ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಉರುಳಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲಗೋಡು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಹಂಪಿ ಬಳಿ 10 ಎಕರೆ ಬಾಳೆ ಬೆಳೆ ಹಾನಿ ಉಂಟಾಗಿದೆ. ತಂಪಿನ ವಾತಾವರಣ ಕಾರಣ ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.</p>.<p>ಉತ್ತರ ಕನ್ನಡ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆ ಸುರಿಯಿತು. ದಾಂಡೇಲಿಯಿಂದ ಭಾಗವತಿ ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕಾರವಾರ, ಹೊನ್ನಾವರ ಸೇರಿ ಹಲವೆಡೆ ಸಿಡಿಲಿನ ಅಬ್ಬರಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹಾನಿಯಾದವು.</p>.<p>ಬೆಳಗಾವಿ ಜಿಲ್ಲೆಯ ಸವದತ್ತಿ, ಮುನವಳ್ಳಿ, ಹಿರೇಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ ಮತ್ತು ಕೌಜಲಗಿಯಲ್ಲಿ ಗುಡುಗು–ಮಿಂಚು ಸಹಿತ, ಬೆಳಗಾವಿ ನಗರ, ಗೋಕಾಕ, ಚನ್ನಮ್ಮನ ಕಿತ್ತೂರು, ರಾಮದುರ್ಗ, ಯರಗಟ್ಟಿಯಲ್ಲಿ ಉತ್ತಮ ಮಳೆಯಾಯಿತು.</p>.<p>ವಿಜಯಪುರ ನಗರ ಸೇರಿದಂತೆ ತಾಳಿಕೋಟೆ, ನಾಲತವಾಡ, ಮುದ್ದೇ ಬಿಹಾಳ, ಚಡಚಣ, ಹೊರ್ತಿ ಹಾಗೂ ದೇವರ ಹಿಪ್ಪರಗಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-51-1990075935</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಹುಬ್ಬಳ್ಳಿ ನಗರ ಸೇರಿದಂತೆ ಧಾರವಾಡ, ಬಳ್ಳಾರಿ, ವಿಜಯನಗರ, ಉತ್ತರ ಕನ್ನಡ, ಬೆಳಗಾವಿ, ವಿಜಯ ಪುರ ಜಿಲ್ಲೆ ಒಳಗೊಂಡು ಕಿತ್ತೂರು, ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ವ್ಯಾಪಕ ಮಳೆ ಆಗಿದೆ.</p>.<p>ಧಾರವಾಡ ಜಿಲ್ಲೆಯ ಕೆಲವೆಡೆ ಮಳೆಯೊಂದಿಗೆ ಗುಡುಗು, ಮಿಂಚಿನ ಆರ್ಭಟ ಜೋರು ಇತ್ತು. ಧಾರವಾಡ ನಗರದಲ್ಲಿ 1 ಸೆಂ.ಮೀ., ಮಳೆಯಾಗಿದೆ.</p>.<p>8 ಮನೆಗಳಿಗೆ ಹಾನಿ: ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ. ಸಿಡಿಲು ಬಡಿದು ಸಂಡೂರಿನಲ್ಲಿ 2 ಎಮ್ಮೆಗಳು ಮೃತಪಟ್ಟಿವೆ. ‘ಕಂಪ್ಲಿಯಲ್ಲಿ–4, ಸಿರುಗುಪ್ಪ –3, ಸಂಡೂರಿನಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ.</p>.<p>2 ವಿದ್ಯುತ್ ಪರಿವರ್ತಕ, 3 ವಿದ್ಯುತ್ ಕಂಬಗಳು, 28 ಮರಗಳು ಉರುಳಿವೆ’ ಎಂದು ಕಂದಾಯ ಇಲಾಖೆ ತಿಳಿಸಿದೆ. ಸಂಡೂರು ತಾಲ್ಲೂಕಿನಲ್ಲಿ 2.1 ಹೆಕ್ಟೇರ್ನಲ್ಲಿ ಹತ್ತಿ ಬೆಳೆ ನಾಶವಾಗಿದೆ.</p>.<p><strong>ಹೊಸಪೇಟೆ ವರದಿ:</strong> ತಾಲ್ಲೂಕಿನ ಧರ್ಮಸಾಗರ, ಭುವನಹಳ್ಳಿ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಉರುಳಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲಗೋಡು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಹಂಪಿ ಬಳಿ 10 ಎಕರೆ ಬಾಳೆ ಬೆಳೆ ಹಾನಿ ಉಂಟಾಗಿದೆ. ತಂಪಿನ ವಾತಾವರಣ ಕಾರಣ ಹಂಪಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.</p>.<p>ಉತ್ತರ ಕನ್ನಡ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆ ಸುರಿಯಿತು. ದಾಂಡೇಲಿಯಿಂದ ಭಾಗವತಿ ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕಾರವಾರ, ಹೊನ್ನಾವರ ಸೇರಿ ಹಲವೆಡೆ ಸಿಡಿಲಿನ ಅಬ್ಬರಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹಾನಿಯಾದವು.</p>.<p>ಬೆಳಗಾವಿ ಜಿಲ್ಲೆಯ ಸವದತ್ತಿ, ಮುನವಳ್ಳಿ, ಹಿರೇಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ ಮತ್ತು ಕೌಜಲಗಿಯಲ್ಲಿ ಗುಡುಗು–ಮಿಂಚು ಸಹಿತ, ಬೆಳಗಾವಿ ನಗರ, ಗೋಕಾಕ, ಚನ್ನಮ್ಮನ ಕಿತ್ತೂರು, ರಾಮದುರ್ಗ, ಯರಗಟ್ಟಿಯಲ್ಲಿ ಉತ್ತಮ ಮಳೆಯಾಯಿತು.</p>.<p>ವಿಜಯಪುರ ನಗರ ಸೇರಿದಂತೆ ತಾಳಿಕೋಟೆ, ನಾಲತವಾಡ, ಮುದ್ದೇ ಬಿಹಾಳ, ಚಡಚಣ, ಹೊರ್ತಿ ಹಾಗೂ ದೇವರ ಹಿಪ್ಪರಗಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-51-1990075935</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>