ಹುಬ್ಬಳ್ಳಿ: ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಉಣಕಲ್ ಕೆರೆ ತುಂಬಿ ಶುಕ್ರವಾರ ಕೋಡಿ ಹರಿದಿದೆ.
ಕೋಡಿ ಹರಿಯುವ ಕಟ್ಟೆ ಮೇಲೆ ನಿಂತಿ ಸ್ಥಳೀಯರು ಸಂಭ್ರಮಿಸುತ್ತಿದ್ದಾರೆ. ಸುತ್ತಲಿನ ನಿವಾಸಿಗಳು ತಂಡೋಪ ತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ. ಗಾಮನಗಟ್ಟಿ, ನವನಗರ ಭಾಗದಲ್ಲಿ ಮಳೆಯಾದರೆ ಕೆರೆ ತುಂಬಿ ಹರಿಯುತ್ತದೆ. ಕೋಡಿ ಬಿದ್ದ ನೀರು ರಾಜಕಾಲುಮೆ ಮುಖಾಂತರ ಹರಿಯುವುದರಿಂದ, ಕಾಲುವೆ ಅಂಚಿನ ಪ್ರದೇಶಗಳಾದ ಪಾಂಡುರಂಗ ಕಾಲೊನಿ, ನಾರಯಣಸೋಫಾ, ಚನ್ನಪೇಟ ನಿವಾಸಿಗಳಲ್ಲಿ ಆತಂಕ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.