ಎದುರಾಳಿ ಜಾರ್ಖಂಡ್ ತಂಡ ತನ್ನ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ವಿದರ್ಭ, ಮಹಾರಾಷ್ಟ್ರ, ಹೈದರಾಬಾದ್, ಮುಂಬೈ ಮತ್ತು ಕೇರಳ ವಿರುದ್ಧ ಪಂದ್ಯಗಳನ್ನಾಡಿತ್ತು. ಕೇರಳ ತಂಡವನ್ನು ಹತ್ತು ವಿಕೆಟ್ಗಳಿಂದ ಮಣಿಸಿ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿ ರಾಜ್ಯಕ್ಕೆ ಕಠಿಣ ಸವಾಲು ಎದುರಾಗಬಹುದು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಜಾರ್ಖಂಡ್ ತಂಡದ ಆಟಗಾರರು ಮೂರು ದಿನಗಳ ಹಿಂದೆಯೇ ನಗರಕ್ಕೆ ಬಂದಿದ್ದಾರೆ. ಉಭಯ ತಂಡಗಳು ಆಟಗಾರರು ಬುಧವಾರ ಹಾಗೂ ಗುರುವಾರ ಕಠಿಣ ಅಭ್ಯಾಸ ನಡೆಸಿದರು.