ಪ್ರಕರಣದ ಪ್ರಾಥಮಿಕ ತನಿಖೆಯನ್ನು ಸ್ಥಳೀಯ ಪೊಲೀಸರೇ ಕೈಗೊಂಡರು. ನಂತರ ಪ್ರಕರಣವನ್ನು ಸಿಒಡಿಗೆ ಹಸ್ತಾಂತರಿಸಲಾಗಿತ್ತು. ಆದರೆ ಮೊದಲ ಇಬ್ಬರು ಆರೋಪಿಗಳು ಸಿಗಲೇ ಇಲ್ಲ. ಮೂರನೇ ಆರೋಪಿಯಾಗಿ ಅಂದಿನ ಕಿಮ್ಸ್ ಡೀನ್ ಡಾ. ಮಲ್ಲಿಕಾರ್ಜುನ ಹಿರೇಮಠ, ನಂತರದಲ್ಲಿ ಕ್ರಮವಾಗಿ ಬಂಗಾರೇಶ ಹಿರೇಮಠ, ವಿಶ್ವಪ್ರಕಾಶ ಉಳ್ಳಾಗಡ್ಡಿಮಠ. ವಿಜಯಕುಮಾರ ಕುಲಕರ್ಣಿ, ಶ್ಯಾಮ ಜಾಧವ ಅವರ ಮೇಲೆ ಪ್ರಕರಣ ದಾಖಲಾಗಿತ್ತು.