‘ಸರ್ಕಾರಕ್ಕೆ ಸಾರಿಗೆ ನೌಕರರೆಂದರೆ ’ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದೆ. ಇದೀಗ, ನಿವೃತ್ತಿ ಪಾವತಿ ವಿಳಂಬವಾಗಿರುವುದರಿಂದ ನಮ್ಮ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಈಗಲಾದರೂ ನಮ್ಮ ಬೇಡಿಕೆಗೆ ಸ್ಪಂದಿಸಿ’ ಎಂದು ಸಂಘದ ಉಪಾಧ್ಯಕ್ಷ ರಫೀಕ ಅಹಮದ ನಾಗನೂರ, ಕೋಶಾಧ್ಯಕ್ಷ ಆರ್.ಜಿ. ಮೊರೆ ಹಾಗೂ ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿಮನವಿ ಮಾಡಿದ್ದಾರೆ.