<p><strong>ಕುಂದಗೋಳ:</strong> ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬೀಜ ಪಡೆಯಲು ನೂರಾರು ರೈತರು ಒಮ್ಮೆಲೇ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.</p>.<p>ರೈತರ ಸರತಿಯ ಪಟ್ಟಿ ಮಾಡಿದ್ದು, ವಿತರಣೆ ವಿಳಂಬಕ್ಕೆ ರೈತರು ವಿರೋಧಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೃಷಿ ಇಲಾಖೆಯಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತರಾತುರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಉದ್ಘಾಟಿಸಿದರು.</p>.<p>‘ಇಲ್ಲಿ ಸೋಯಾಬೀನ್ ಕೆಡಿಎಸ್ 726 ಸಂಗ್ರಹ ಕಡಿಮೆ ಇದ್ದು, ತಮಗೆ ಬಂದಂತೆ ಪಟ್ಟಿ ಮಾಡಿದರೆ ನಾವೇನು ಮಾಡೋಣ’ ಎಂದು ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ರೈತ ಪ್ರವೀಣ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಕೇಳಿದರೆ ಮಂಗಳವಾರ, ಬುಧವಾರ ನೀಡುವುದಾಗಿ ತಿಳಿಸುತ್ತಿದ್ದಾರೆ. ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.</p>.<p>ಮಧ್ಯಾಹ್ನ 12.30ಕ್ಕೆ ವಿತರಣೆ ಪ್ರಾರಂಭಿಸಿದರು. ರೈತರು ನಡುವೆ ಹಾಗೂ ಕೃಷಿ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ಪಟ್ಟಿ ಪ್ರಕಾರ ಹೆಸರು ಕರೆದು ವಿತರಣೆ ಪ್ರಾರಂಭಿಸಿದರು.</p>.<p>ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಗಡ್ದದವರ ಪ್ರತಿಕ್ರಿಯೆ ನೀಡಿ, ‘ಶಾಸಕರು ಲಭ್ಯವಿರದ ಕಾರಣ ರೈತರಿಗೆ ತೊಂದರೆಯಾಗಬಾರದು, ನೀವೇ ಪ್ರಾರಂಭಿಸಿ ಎಂದು ಹೇಳಿ ದ್ದರಿಂದ ಇಂದು ಆರಂಭಿಸಿದ್ದೇವೆ. ರೈತರ ಒಂದು ಎಫ್.ಐ.ಡಿಗೆ ಒಟ್ಟು 3 ಬ್ಯಾಗ್ ಸೋಯಾಬೀನ್ ವಿತರಿಸಲಾಗುತ್ತಿದೆ. ಈಗ ಸಂಗ್ರಹಕ್ಕೆ ಅನುಗುಣವಾಗಿ ಎಲ್ಲ ರೈತರಿಗೂ ದೊರೆಯಲಿ ಎಂಬ ಉದ್ದೇಶದಿಂದ 2 ಬ್ಯಾಗ್ ವಿತರಿಸುತ್ತಿದ್ದೇವೆ ಎಂದು ಹೇಳಿದರು.</p>.<p>‘ತಾಲ್ಲೂಕಿನಲ್ಲಿ 5 ಬೀಜ ವಿತರಣಾ ಕೇಂದ್ರಗಳಿದ್ದು, ಒಟ್ಟು ಈಗ ಸೋಯಾಬೀನ್ 500 ಕ್ವಿಂಟಲ್, ಉದ್ದು 69 ಕ್ವಿಂಟಲ್, ಹೆಸರು 46 ಕ್ವಿಂಟಲ್, ಶೇಂಗಾ 230 ಕ್ವಿಂಟಲ್, ಮೆಕ್ಕೆಜೋಳ 73 ಕ್ವಿಂಟಲ್ ಸಂಗ್ರಹ ಬಂದಿದೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-24-1985793856</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ:</strong> ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬೀಜ ಪಡೆಯಲು ನೂರಾರು ರೈತರು ಒಮ್ಮೆಲೇ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.</p>.<p>ರೈತರ ಸರತಿಯ ಪಟ್ಟಿ ಮಾಡಿದ್ದು, ವಿತರಣೆ ವಿಳಂಬಕ್ಕೆ ರೈತರು ವಿರೋಧಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೃಷಿ ಇಲಾಖೆಯಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತರಾತುರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಉದ್ಘಾಟಿಸಿದರು.</p>.<p>‘ಇಲ್ಲಿ ಸೋಯಾಬೀನ್ ಕೆಡಿಎಸ್ 726 ಸಂಗ್ರಹ ಕಡಿಮೆ ಇದ್ದು, ತಮಗೆ ಬಂದಂತೆ ಪಟ್ಟಿ ಮಾಡಿದರೆ ನಾವೇನು ಮಾಡೋಣ’ ಎಂದು ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ರೈತ ಪ್ರವೀಣ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಕೇಳಿದರೆ ಮಂಗಳವಾರ, ಬುಧವಾರ ನೀಡುವುದಾಗಿ ತಿಳಿಸುತ್ತಿದ್ದಾರೆ. ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.</p>.<p>ಮಧ್ಯಾಹ್ನ 12.30ಕ್ಕೆ ವಿತರಣೆ ಪ್ರಾರಂಭಿಸಿದರು. ರೈತರು ನಡುವೆ ಹಾಗೂ ಕೃಷಿ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿ ಪಟ್ಟಿ ಪ್ರಕಾರ ಹೆಸರು ಕರೆದು ವಿತರಣೆ ಪ್ರಾರಂಭಿಸಿದರು.</p>.<p>ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಗಡ್ದದವರ ಪ್ರತಿಕ್ರಿಯೆ ನೀಡಿ, ‘ಶಾಸಕರು ಲಭ್ಯವಿರದ ಕಾರಣ ರೈತರಿಗೆ ತೊಂದರೆಯಾಗಬಾರದು, ನೀವೇ ಪ್ರಾರಂಭಿಸಿ ಎಂದು ಹೇಳಿ ದ್ದರಿಂದ ಇಂದು ಆರಂಭಿಸಿದ್ದೇವೆ. ರೈತರ ಒಂದು ಎಫ್.ಐ.ಡಿಗೆ ಒಟ್ಟು 3 ಬ್ಯಾಗ್ ಸೋಯಾಬೀನ್ ವಿತರಿಸಲಾಗುತ್ತಿದೆ. ಈಗ ಸಂಗ್ರಹಕ್ಕೆ ಅನುಗುಣವಾಗಿ ಎಲ್ಲ ರೈತರಿಗೂ ದೊರೆಯಲಿ ಎಂಬ ಉದ್ದೇಶದಿಂದ 2 ಬ್ಯಾಗ್ ವಿತರಿಸುತ್ತಿದ್ದೇವೆ ಎಂದು ಹೇಳಿದರು.</p>.<p>‘ತಾಲ್ಲೂಕಿನಲ್ಲಿ 5 ಬೀಜ ವಿತರಣಾ ಕೇಂದ್ರಗಳಿದ್ದು, ಒಟ್ಟು ಈಗ ಸೋಯಾಬೀನ್ 500 ಕ್ವಿಂಟಲ್, ಉದ್ದು 69 ಕ್ವಿಂಟಲ್, ಹೆಸರು 46 ಕ್ವಿಂಟಲ್, ಶೇಂಗಾ 230 ಕ್ವಿಂಟಲ್, ಮೆಕ್ಕೆಜೋಳ 73 ಕ್ವಿಂಟಲ್ ಸಂಗ್ರಹ ಬಂದಿದೆ’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-24-1985793856</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>