‘ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಹತ್ತು ವರ್ಷಗಳಿಂದ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ. ನೀರು, ವಿದ್ಯುತ್ ಸಿಕ್ಕಿದೆಯಾದರೂ, ರಸ್ತೆ, ಒಳಚರಂಡಿ ಇನ್ನೂ ಆಗಿಲ್ಲ. ಹಲವು ಮುಖಂಡರಿಗೆ ಹತ್ತಾರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಬಡಾವಣೆಯ ನಿವಾಸಿ ಕೊಟ್ರೇಶ್ ಹುಳ್ಳಿ ಹೇಳಿದರು.