‘ಅಣ್ಣ ತಲೆ ಮರೆಸಿಕೊಂಡಿರುವ ಸಂಬಂಧ, ವಿಚಾರಣೆಗೆಂದು ತಂದೆ ಲಕ್ಷ್ಮಣ ಅವರನ್ನು ಅಕ್ಟೋಬರ್ ಮೊದಲ ವಾರದಲ್ಲಿ ಕರೆದೊಯ್ದ ಪೊಲೀಸರು, ಠಾಣೆಯಲ್ಲೇ 5 ದಿನ ಇಟ್ಟುಕೊಂಡು ಹಲ್ಲೆ ನಡೆಸಿದ್ದರು. ಬಳಿಕ, ಅವರನ್ನೂ ಜೈಲಿಗೆ ಕಳಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಅವರು, ಹತ್ತು ದಿನದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು’ ಎಂದು ಲಕ್ಷ್ಮಣ ಇಂದರಗಿ ಅವರ ಪುತ್ರಿ ಪೂಜಾ ಇಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.