ನಗರದ ರಂಭಾಪುರಿ ಕಲ್ಯಾಣಮಂಟಪದಲ್ಲಿ ಮಂಗಳವಾರ ನಡೆದ ಕಾರ್ತೀಕ ಸಹಸ್ರ ದೀಪೋತ್ಸವ, ಧರ್ಮಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು, ಬದುಕಿನ ಅಜ್ಞಾನ ತೊಳೆಯಲು ಗುರು ಬೇಕು, ಹಚ್ಚುವುದಾದರೆ ದೀಪ ಹಚ್ಚು ಆದರೆ, ಬೆಂಕಿ ಹಚ್ಚಬೇಡ, ಆರಿಸುವುದಾದರೆ ಬೆಂಕಿ ಆರಿಸು ಆದರೆ, ದೀಪ ಆರಿಸಬೇಡ ಎಂದು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಹೇಳಿದ್ದಾರೆ’ ಎಂದರು.