‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಹೊರಟಿದ್ದ ವಿಮಾನ ಬೆ. 7.20ಕ್ಕೆ ಹುಬ್ಬಳ್ಳಿಯಲ್ಲಿ ಇಳಿಯಬೇಕಿತ್ತು. ಇಲ್ಲಿ ಮೋಡಕವಿದ ವಾತಾವರಣವಿದ್ದ ಕಾರಣ ವಿಮಾನ ಇಳಿಸಲು ಸಾಧ್ಯವಾಗದೇ 20 ನಿಮಿಷ ಆಗಸದಲ್ಲಿಯೇ ಹಾರಾಡಿಸಬೇಕಾಯಿತು. ಬಳಿಕ ಪೈಲಟ್ ವಿಮಾನವನ್ನು ಮಂಗಳೂರಿನ ಕಡೆ ತಿರುಗಿಸಲು ನಿರ್ಧರಿಸಿದರು’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ತಿಳಿಸಿದರು.