ಉದ್ಯೋಗಾವಕಾಶಗಳ ಕುರಿತು ಮಾತನಡಿದ ವಾಣಿಜ್ಯ ತೆರಿಗೆ ಇಲಾಖೆಯ ಮತ್ತೊಬ್ಬ ಜಂಟಿ ಆಯುಕ್ತ ವೀರಭದ್ರ ಬಿ. ಹಂಚಿನಾಳ, ‘ಪದವಿ ನಂತರ ಕೆ.ಎ.ಎಸ್, ಐ.ಎ.ಎಸ್, ಬ್ಯಾಂಕ್, ರೈಲ್ವೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬಹುದು. ಇದಕ್ಕೆ ಬೇಕಾದ ಅಗತ್ಯ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.