ಅರಣ್ಯ ಇಲಾಖೆ ಸಿಬ್ಬಂದಿಚಿರತೆ ಹಿಡಿಯುವ ಕಾರ್ಯಾಚರಣೆಯ ತೀವ್ರಗೊಳಿಸಿದ್ದು, ಐದು ಕಡೆಗಳಲ್ಲಿ ಬೋನು ಇಡಲಾಗಿದೆ. ಚಿರತೆ ಕುರುಹು ಆಧರಿಸಿ ಮ್ಯಾಪಿಂಗ್ ಮಾಡಲಾಗಿದ್ದು, ಅದೇ ಜಾಡಿನಲ್ಲಿ ಅರಿವಳಿಕೆ ತಜ್ಞರ ತಂಡದೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ತಿಳಿಸಿದ್ದಾರೆ.