ಕೆನ್ ಅಗ್ರಿಟೆಕ್ನ ನಿರ್ದೇಶಕ ವಿವೇಕ ನಾಯಕ ’ಉತ್ತಮ ಗುಣಮಟ್ಟ ನೀಡುವುದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಮತ್ತು ನಿಗದಿತ ಸಮಯದಲ್ಲಿ ಗ್ರಾಹಕರಿಗೆ ತಲುಪಿಸುವ ವಿಚಾರದಲ್ಲಿ ಯಾವಾಗಲೂ ಮುಂದಿರಬೇಕು. ಬಾಳೆಹಣ್ಣು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯತ್ತಿದ್ದರೂ ರಫ್ತು ಮಾಡುವ ಪ್ರಮಾಣ ಕಡಿಮೆಯಿದೆ. ರಫ್ತಿನಲ್ಲಿಯೂ ದೊಡ್ಡ ಸಾಧನೆ ಮಾಡಬೇಕು’ ಎಂದು ಹೇಳಿದರು.