‘ಯಶ್ ನನ್ನ ಶಿಷ್ಯ ಎನ್ನಲು ಹೆಮ್ಮೆ. ಅವನು ಬೆನಕ ನಾಟಕ ತಂಡದ ಸದಸ್ಯನಾಗಿದ್ದ. ವಿವಿಧೆಡೆ ನಾಟಕ ಪ್ರದರ್ಶನಕ್ಕೆ ತೆರಳುವಾಗ ಅವನು, ಬೆಂಗಳೂರಿನಲ್ಲಿ ನಮ್ಮ ಕಚೇರಿಯ ಎರಡನೇ ಮಹಡಿಯಿಂದ ನಾಟಕ ಸಲಕರಣೆಗಳನ್ನು ವಾಹನಕ್ಕೆ ತುಂಬಿ, ಇಳಿಸುವ ಕೆಲಸ ಅವನದ್ದಾಗಿತ್ತು.ಅಂದಿನ ಅವನ ಪರಿಶ್ರಮ, ನಂಬಿಕೆ, ಆತ್ಮಸ್ಥೈರ್ಯ ಇಂದು ಮಹಾನ್ ನಟನನ್ನಾಗಿಸಿದೆ. ಸಾಧನೆ ಜೊತೆ ಸಾಮಾಜಿಕ ಕಳಕಳಿಯೂ ಅಗತ್ಯ. ಬೇಡ ಅನ್ನೋದನ್ನು ಸಿನಿಮಾ ಬೇಕು ಎನ್ನುವಂತೆ ಮಾಡುತ್ತದೆ’ ಎಂದು ನಟ ಯಶ್ ಸಾಧನೆ ಬಗ್ಗೆ ನಾಗಾಭರಣ ಮೆಚ್ಚುಗೆ ವ್ಯಕ್ತಪಡಿಸಿದರು.